Sunday, July 25, 2010

ನಗುವ ವಿಷಯ (ಸಂಗ್ರಹಗಳು )

ಸಂಗ್ರಹಗಳು
ಅನರ್ಥ ಕೊಶಗಳು
ಡಾಕ್ಟರ್ - ಯಮಧರ್ಮರಾಯನ ಏಜೆಂಟ್
ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್
ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ
ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ
ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ
ಹಾಲು - ದ್ರವ ರೂಪದ ಹಸುವಿನ ಮಾಂಸ
ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ
ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ
ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು
ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ
ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ
ಕಳ್ಳ - ಅನ್ಯರ ಆಸ್ತಿಗೆ ಒಡೆಯ
ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
ಪಕ್ಕದ್ ಮನೆ ಹುಡುಗಿ ಬಾರಮ್ಮ
ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................
ಪಕ್ಕದ್ ಮನೆ ಹುಡುಗಿ ಬಾರಮ್ಮ...
ನಮ್ಮಮ್ಮಾ ಇಲ್ಲಾ..
ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]
ಅಕ್ಕ ಪಕ್ಕದ ಜನರನು ನೋಡುತ
ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ
ಶುಕ್ರವಾರದಿಯ ಚಿತ್ರಮಂಜರಿ
ಮರೆಯದೆ ನೀನು ನೋಡಲು ಬಾರೆ..
ಪಕ್ಕದ್ ಮನೆ ಹುಡುಗಿ ಬಾರಮ್ಮ [1]
ಇಂದಿನ ಪೇಪರ್ ಓದಲು ಬಾರೆ
ಹೆಪ್ಪಿಗೆ ಮೊಸರನು ಕೇಳಲು ಬಾರೆ
ಕರೆಂಟು ಹೋದ ಸಮಯದಿ ನೇನು                    

ನಾಚಿಕೆಯಾಗುತ್ತೆ..   

ಸುಂದರ ಹುಡುಗಿಯೊಬ್ಬಳು ಸಂತಾನ ಬಟ್ಟೆ ಅಂಗಡಿಗೆ ಬಂದಿದ್ದಳು.

ಆಕೆ: ನಂಗೊಂದು ಅಂಡರ್ವೀರ್ ತೋರಿಸಿ.

ಸಂತಾ (ನಾಚಿಕೆಯಿಂದ): ಈಗ ತುಂಬಾ ಜನ ಇದ್ದಾರೆ. ಪ್ಲೀಸ್.. ಮತ್ತೆ ಬನ್ನಿ...

ಸ್ನೇಹದ ಪರಾಕಾಷ್ಠೆ   

ಸಂತಾ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದ. ಅವನ ಸ್ನೇಹಿತ ಕಾರಣ ಕೇಳಿದಾಗ- ನನ್ನ ಹೆಂಡತಿ ನನ್ನ ಆತ್ಮೀಯ ಮಿತ್ರನ ಜತೆ ಓಡಿ ಹೋಗಿದ್ದಾಳೆ. ಗೆಳೆಯ ಇಲ್ಲದೆ ಬದುಕೋದು ನನಗೆ ಸಾಧ್ಯವಿಲ್ಲ..
ಮದುವೆಯಾಗಿರೋದು ಗೊತ್ತು ತಾನೇ?   
ಹೆಂಡತಿ: ರೀ.. ನಿಮಗೆ ಈಗ ಮದ್ವೆಯಾಗಿರೋದು ಗೊತ್ತು ತಾನೇ.. ಮತ್ಯಾಕೆ ಹುಡುಗೀರ ಕಡೆ ನೋಡೋದು?
ಸಂತಾ: ಅಂದ್ರೆ ನಿನ್ನ ಪ್ರಕಾರ ನಾನು ಡಯಟ್ ಮಾಡೋವಾಗ ಮೆನು ಕೂಡ ನೋಡ್ಬಾರ್ದು ಅಂತಾನಾ..?
ಇದು ಸಾಮ್ಯತೆ   
ಸಂತಾ: ನಂಗೆ ಮತ್ತು ಬಿಲ್ ಗೇಟ್ಸ್ಗಿರುವ ಸಾಮ್ಯತೆ ಏನು ಗೊತ್ತಾ?
ಬಂತಾ: ಇಲ್ಲಪ್ಪ.. ಏನು?
ಸಂತಾ: ಸರಿ.. ಹೇಳ್ತೇನೆ ಕೇಳು.. ಅವನು ನನ್ನ ಮನೆಗೆ ಬಂದಿಲ್ಲ ಮತ್ತು ನಾನೂ ಅವನ ಮನೆಗೆ ಹೋಗಿಲ್ಲ..
ಸೆಕ್ಸ್ ಅಂದ್ರೆ...   
ಮಗ: ಸೆಕ್ಸ್ ಅಂದ್ರೇನಪ್ಪ?
ಪ್ರಶ್ನೆ ಕೇಳಿ ಸಂತಾ ಉದ್ವೇಗಗೊಂಡರೂ ನಂತರ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ.
ಮಗ: ಶಾಲೆ ಪ್ರವೇಶ ಪತ್ರದಲ್ಲಿರುವ ಅಷ್ಟು ಚಿಕ್ಕ ಜಾಗದಲ್ಲಿ ನೀನು ಹೇಳಿದ್ದನ್ನೆಲ್ಲ ಹೇಗಪ್ಪಾ ತುಂಬಿಸೋದು?
ಹಳೆಯ ಕೋಟು
ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.
ಬೆಳಿಗ್ಗೆ ಎಂಟಕ್ಕೆ ಸ್ನಾನ, ಊಟ ಮಾಡಿ ಶಾಲೆಗೆ ಹೊರಟ.
``ಅಮ್ಮಾ..."
``ಏನೋ ತಿಂಮಾ?"
``ನನ್ನ ಕೋಟು ಎಲ್ಲಿ?"
ದಿಗಿಲು ಬಿದ್ದು ಕೇಳಿದ ತಾಯಿಯನ್ನು.
``ಅಗಸನಿಗೆ ಹಾಕಿದೆ, ತುಂಬ ಕೊಳೆಯಾಗಿದ್ದಿತು"
ಗಳಗಳ ಅಳುತ್ತ ಕುಳಿತ ತಿಂಮ.
``ಬೇರೆ ಇನ್ನೊಂದು ಇದೆಯಲ್ಲವೊ? ಆ ಕೋಟು ಹಾಕಿಕೊಂಡು ಹೋಗು, ಅಳಬೇಕೆ? ಆ ಹೊಲಸು ಕೋಟೇ ಆಗಬೇಕೇ ನಿನಗೆ?"
ಅದರ ಒಳಗಡೆ ಉತ್ತರಗಳನ್ನು ಬರೆದಿಟ್ಟುಕೊಂಡಿದ್ದ ತಿಂಮ.
ಎರಡು ಅರ್ಧಗಳಾದರೆ ಒಂದು
ತಿಂಮನಿಗೆ ಪರೀಕ್ಷೆ ಸಮೀಪಿಸಿದಂತೆಲ್ಲ ಅವನ ತಂದೆಗೆ ಯೋಚನೆ ಹೆಚ್ಚಿತು. ದುಗುಡ, ಕಳವಳಕ್ಕೀಡಾಯಿತು ಅವರ ಮನಸ್ಸು.
ಸುಖವಾಗಿ ಮೂರು ಸಲ ಉಣ್ಣುತ್ತಿದ್ದ, ಉಳಿದ ಸಮಯವೆಲ್ಲ ನಿದ್ರೆ ಮಾಡುತ್ತಿದ್ದ ತಿಂಮ.
ಆ ಈ ಮಾಸ್ತರುಗಳನ್ನೆಲ್ಲ ಕಂಡು ಸಲಹೆ ಪಡೆದರು ತಿಂಮನ ತಂದೆ. ಪುಸ್ತಕದ ಅಂಗಡಿಗಳನ್ನೆಲ್ಲ ಹೊಕ್ಕು ಬಂದರು.
``ತಿಂಮಾ!"
``ಏನಪ್ಪಾ?"
``ತೆಗೆದುಕೋ, ಈ ಗೈಡ್ ತಂದಿದ್ದೇನೆ."
``ಒಳ್ಳೆಯದೇನಪ್ಪಾ ಇದು?"
``ನಿನ್ನ ಕ್ಲಾಸಿನ ಟೀಚರೇ ಹೇಳಿದರಯ್ಯ ಇದನ್ನು ಓದಿಬಿಡು. ಅರ್ಧ ಪಾಸಾದಂತೆಯೇ."
ಗೈಡನ್ನು ತೆಗೆದು ನೋಡುತ್ತ ಮೆಲ್ಲನೆ ಗೊಣಗಿಕೊಂಡ ತಿಂಮ.
``ಇನ್ನೊಂದು ಪ್ರತಿಯನ್ನು ತಂದುಬಿಡಬೇಕಿತ್ತು. ಪೂರ್ತಿ ಪಾಸು..."
ನನ್ನ ತಪ್ಪಿಲ್ಲ
ಅನೇಕರಿಗಿರುವಂತೆ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಒಯ್ಯುವ ಅಭ್ಯಾಸ ತಿಂಮನಿಗೆ. ಕೇವಲ ಕೆಲವರಿಗೆ ಮಾತ್ರವೇ ಇರುವಂತೆ ಮರಳಿ ತಂದುಕೊಡುವ ಅಭ್ಯಾಸವೂ ಇದ್ದಿತು ಇವನಲ್ಲಿ.
ಓದುವ ಅಭ್ಯಾಸ? ಆ ಮಾತು ಈಗ ಬೇಡ.
ಲೈಬ್ರರಿಯ ಮಾಸ್ತರಿಗೆ ತಿಂಮ ತಂದುಕೊಟ್ಟ, ತಾನು ಕೊಂಡೊಯ್ದಿದ್ದ ಪುಸ್ತಕವನ್ನು.
``ಓದಿದೇನಯ್ಯಾ"
``ಓದಿದೆ ಸಾರ್."
ಮಾಮೂಲು ಪ್ರಶ್ನೆ, ಮಾಮೂಲು ಉತ್ತರ.
``ಹೇಗಿದೆ?"
``ಚೆನ್ನಾಗಿದೆ ಸಾರ್."
ಎರಡೆರಡು ಬಾರಿ ಪುಸ್ತಕವನ್ನು ಹಿಂದು-ಮುಂದು ನೋಡಿ ಮಾಸ್ತರರು ನುಡಿದರು:
``ಬಹು ಕ್ಲಿಷ್ಟವಾಗಿದೆ."
``ಇಲ್ಲ ಸಾರ್, ನೀವು ಕೊಡುವಾಗಲೇ ಹೀಗಿತ್ತು ಸಾರ್."
ಅಂತೂ ಸರಿಯಾಗಿದೆ
ತಿಂಮನ ತಾಯಿ ಮಹಾ ಗಠಾಣಿ.
ಒಂದು ದಿನ ಅಂಗಡಿಯ ಸೆಟ್ಟಿಯೊಡನೆ ಜಗಳಕ್ಕೇ ಬಂದಳು.
``ಏನಪ್ಪಾ ಸೆಟ್ಟಿ? ಒಂದು ವೀಸೆ ಹುಣಸೆಹಣ್ಣು ಕೊಡೆಂದು ತಿಂಮನನ್ನು ಕಳಿಸಿದರೆ ಎಷ್ಟು ಕೊಟ್ಟೆ ನೀನು?"
``ಏಕ್ರಮ್ಮಾ, ಒಂದು ವೀಸೆ ಸರಿಯಾಗಿ ಕಳಿಸಿದೆನಲ್ಲ."
``ವೀಸೆ ಎಲ್ಲಿ ಬರಬೇಕು? ನಾನು ಮನೇಲಿ ತೂಕ ಮಾಡಿದೆ, ಮೂರು ಸೇರು ಮಾತ್ರವೇ ಇತ್ತಲ್ಲ."
ಕಕ್ಕಾಬಿಕ್ಕಿಯಾದ ಸೆಟ್ಟಿ ಕೇಳಿದ-
``ಅಹುದಾ? ತಿಂಮನನ್ನು ತೂಕ ಮಾಡಿ ನೋಡಿದಿರೇನಮ್ಮಾ?"
ಉಪಯೋಗ
(ಪ್ರಶ್ನೆಯೊಂದಕ್ಕೆ ತಿಂಮನ ಉತ್ತರ ಹೀಗಿತ್ತು-)
ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ-ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ.
ಹೆಂಡತಿಗೆ ಕಾಯಿಲೆ
ತಿಂಮನ ಹೆಂಡತಿಯನ್ನು ಡಾಕ್ಟರು ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
``ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ."
``ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆಮಧ್ಯೆ ನಿಲ್ಲಿಸಿಬಿಡುತ್ತಾಳೆ."
``ಏಕೆ?"
``ಉಸಿರಾಡಲಿಕ್ಕೆ."
ತಿಳಿದರೆ ಗತಿ?
ತಿಂಮ ಊರಿಗೆ ಬಂದುದೇ ತಡ, ಮನೆಯಾಕೆ ಶುರುಮಾಡಿಬಿಟ್ಟಳು:
``ಪಕ್ಕದ ಮನೆಯ ಶಾರದಮ್ಮನಿಗೆ ಆಕೆಯ ಗಂಡ ಏನೇನು ಮಾಡಿಸಿದ್ದಾರೆ ನೋಡಿ..."
``ಏನು ಮಾಡಿಸಿದ್ದಾರಂತೆ?"
ತಿಂಮ ಕೇಳಿದ.
``ವಜ್ರದ ಓಲೆ ತಂದಿದ್ದಾರೆ. ರೇಡಿಯೋ,ಬಳೆ, ಇನ್ನೂ ಏನೇನೋ ಚಿನ್ನದ ಒಡವೇನೆಲ್ಲ ತಂದುಕೊಟ್ಟಿದ್ದಾರೆ."
``ಹೂ, ಏನು ಈಗ?"
``ನೀವೇನು ತಂದುಕೊಟ್ಟಿರಿ?"
ಗಾಬರಿಯಿಂದ ಕೇಳಿದ ತಿಂಮ-
``ಯಾರು ನಾನೇ? ನಾಳೆ ತಿಳಿದರೆ ಸುಮ್ಮನಿರುತ್ತಾನೆಯೇ ಆ ಶಾರದಮ್ಮನ ಗಂಡ?
ಜೇಬು-ತಲೆ
ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ-ಇಲ್ಲಿ ನೋಡುತ್ತ ಊರೆಲ್ಲ ಸುತ್ತಿದ. ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.
ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು.
``ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು" ಎಂದರು.
``ಕೊಡುವುದಿಲ್ಲ."
ತಕರಾರು ಹೂಡಿದ ತಿಂಮ.
``ನಿನ್ನ ತಲೆ ತೆಗೆಯುತ್ತೇವೆ."
``ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ."
ಹೆಚ್ಚು ಭಾರವಾದವು
ತಿಂಮ ಸಪತ್ನೀಕನಾಗಿ ಪ್ರಯಾಣ ಹೊರಟ ಒಂದು ಸಾರಿ. ದಾರಿಯಲ್ಲಿದ್ದ ನದಿಯೊಂದನ್ನು ದಾಟಬೇಕಾಯಿತು. ಇನ್ನಿತರ ಪ್ರಯಾಣಿಕರುಗಳೊಂದಿಗೆ ತಿಂಮ ದಂಪತಿಗಳು ಹರಿಗೋಲಿನಲ್ಲಿ ಏರಿ ಕುಳಿತರು.
ಮಧ್ಯ ನದಿ, ಹರಿಗೋಲು ಹೊಯ್ದಾಡಿ ಮಗುಚಿಕೊಳ್ಳುವಂತಾಯಿತು. ದಿಗ್ಭ ಮೆಯಿಂದ ಕಿರುಚಿದರು. ಗಾಬರಿಯಿಂದ ಅಂಬಿಗ ಕೂಗಿಕೊಂಡ.
``ಹೆಚ್ಚು ಭಾರವಾದುದನ್ನು ನದಿಯಲ್ಲಿ ಬಿಸುಟಿಬಿಡಿ. ಹೂ ಬೇಗ ಬೇಗ!"
ಅವರಿವರು ಗಂಟು ಮೂಟೆಗಳನ್ನು ನದಿಗೆ ಎಸೆದರು.
ತಿಂಮ?
ನಗೆಹನಿಗಳು - ೦೧
ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”
ಮಗ “ಪ್ರಾಮಾಣಿಕತೆ ಎಂದರೆ?”
ಅಪ್ಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು”
ಮಗ “ಹಾಗಾದರೆ ವಿವೇಚನೆ ಎಂದರೇನು?”
ಅಪ್ಪ “ಮಾತು ಕೊಡದೇ ಇರೋದೆ”
ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ”
“ಏತಕ್ಕೆ?”
“ಉಸಿರಾಡಲಿಕ್ಕೆ”
ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?”
“ಅವಳು ನನ್ನೆದುರು ಮೊಣಕಾಲೂರಿದಳು”
“ಅದು ಹೇಗೆ ಸಾಧ್ಯವಾಯಿತೋ ಮಹರಾಯ?”
“ನಾನು ಮಂಚದ ಕೆಳಗೆ ನುಸುಳಿದ್ದೆ”
ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ”. “ಸರಿಯಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ.
ಶೀಲಾ “ರೀ ಒಂದು ಸೋಪು ಕೊಡಿ.”
ತಿಮ್ಮ “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.”
ಶೀಲಾ “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?”

ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶೀಲಾ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”
ಶೀಲಾ “ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.”

ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! “ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ”
“ಯಾವುದಯ್ಯಾ ಅದು?” ತಿಂಮ ಕೇಳಿದ.
“ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . ಸುಣ್ಣಬಣ್ಣವಿಲ್ಲ.”
“ತಿಳಿಯಿತು ಬಿಡು” ಎಂದ ತಿಂಮ “ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು.”

No comments: