Sunday, July 25, 2010

ಹಾಸ್ಯ ಸನ್ನಿ­ವೇ­ಶ­ಗಳು ,ಸಂಗ್ರಹ 6

ಹಾಸ್ಯ ಸನ್ನಿ­ವೇ­ಶ­ಗಳು ಎಲ್ಲಿ ಹ್ಯಾಗೆ ಹುಟ್ಟು­ತ್ತವೆ ಎನ್ನಲು ಸಾಧ್ಯ­ವಿಲ್ಲ. ಪ್ರತಿ­ಕ್ಷ­ಣ­ದಲ್ಲೂ ಹಾಸ್ಯ­ವಿ­ರು­ತ್ತದೆ. ದ್ವಿಅರ್ಥ ಮಾತು­ಗಳು ಹಾಗೇ ಬೇಗನೆ ನಗೆ ಬರು­ತ್ತದೆ.
ಹಳ್ಳಿ­ಯಲ್ಲಿ ಗೊತ್ತಿ­ಲ್ಲದೇ ಬಹ­ಳಷ್ಟು ಹಾಸ್ಯ ಘಟ­ನೆ­ಗಳು ನಡೆ­ಯು­ತ್ತದೆ.
ಘಟನೆ ಒಂದು...
ಸನ್ನಿ­ವೇಶ ಶ್ರಾದ್ಧದ ಮನೆ..
ಶ್ರಾದ್ಧದ ಮನೆ­ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ­ಗೆಯ ಹತ್ತಿರ ಬಂದ ನೆಂಟ `ಅ­ತ್ತಿಗೆ ಒಳ್ಳೆಯ ಬೋಳ­ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.
ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.
ಆದ್ರೆ ಈ ಬಾವ ಕಷಾಯ ಕುಡಿ­ದ­ವನೇ ಇಸ್ಪೀಟ್‌ ಆಡ­ಲಿಕ್ಕೆ ಮಾಳಿ­ಗೆ­ಯನ್ನು ಎರಿದ. ಅತ್ತಿಗೆ ಮಲ­ಗುವ ಮೊದಲು ಇಸ್ಪೀಟ್‌ ಆಡು­ತ್ತಿ­ರುವ ಕ್ರೀಡಾ­ಪ­ಟ್ಟು­ಗ­ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು­ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು­ತ್ತಿ­ದ್ದಾನೆ. ಆಶ್ಚ­ರ್ಯ­ವಾ­ಯಿತು.. ಸಹ­ಜ­ವಾ­ಗಿಯೇ ಅವಳು ಕೇಳಿ­ದಳು
`ಅರೇ ಬಾವ ಎನ್ನ ಹತ್ತಿರ ಮಲ­ಗಿ­ಕೊ­ಳ್ಳತಿ ಹೇಳಿ­ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?'

ಘಟನೆ ಎರಡು....
ಮದು­ವೆಯ ಮನೆ ರಾತ್ರಿ ಸಮಯ...
ನಾಳೇ ಬೆಳ­ಗಾ­ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು­ಗುವ ಗಡ­ಬಿ­ಡಿ­ಯ­ಲ್ಲಿ­ದ್ದಾರೆ. ನಾಲ್ಕೈದು ಮಂದಿ ಹೆಂಗ­ಸ­ರಿಗೆ ಮಲು­ಗಲು ಜಾಗ ಸಿಕ್ಕುತ್ತಾ ಇಲ್ಲ.
ಸಿಟ್ಟಿ­ನಿಂದ ಗೊಣ­ಗು­ತ್ತಿ­ದ್ದಾರೆ `ಎಲ್ಲಿ ನೋಡಿ­ದರು ಮಲ­ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ­ನಿಗೆ ಇವರ ಮಾತು ಕೇಳಿ­ಸಿತು. `ಅ­ವ­ನೆಂದ ಮಲ­ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.

ಘಟನೆ ಮೂರು..
ಚಲಿ­ಸು­ತ್ತಿ­ರುವ ಬಸ್‌...
ತಾಯಿ, ಮಗು, ಅಪ್ಪ ಮೂರು ಜನ ತಿರು­ಗಾ­ಟಕ್ಕೆ ಹೊರ­ಟಿ­ದ್ದರು. ಮಗು­ವಿಗೆ ಮೂತ್ರ­ಶಂಕೆ ಬಂಧು ತಾಯಿ ಮಗು­ವಿನ ಆರೈ­ಕೆ­ಯ­ಲ್ಲಿ­ದ್ದಳು. ಅದೆ ಸಮ­ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ­ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ­ಲಲ್ಲಿ ಹತ್ತಿ­ದರು.
ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು­ವ­ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ­ಪಾಗಿ ದೊಡ್ಡ­ದಾಗಿ ಕೂಗಿದ
`ಏ ಚೆಡ್ಡಿ ಹಾಕಿ­ಯೇನೆ' ಎಂದು ಹೆಂಡ್ತಿ ತಡ ಮಾಡ­ಲಿಲ್ಲ ನಿಮ್ಮ ಎದು­ರಿಗೆ ಹಾಕಿ­ನಲ್ರೋ' ಎಂದಳು
ಬಸ್‌­ನ­ಲ್ಲಿ­ದ್ದ­ವ­ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ­ರ­ವನ್ನು ಹೀಗೆ ಮಾತಾ­ಡು­ತ್ತಾ­ರಲ್ಲ ಎಂದು ಕೊನೆಗೆ ನೋಡಿ­ದರೆ, ಮೂತ್ರ ಮಾಡಿ­ಸಲು ಮಗು­ವನ್ನು ಕರೆದು ಕೊಂಡು ಹೋಗಿ­ದ್ದ­ರಲ್ಲ ಮಗು­ವಿಗೆ ಚೆಡ್ಡಿ ಹಾಕಿ­ದಿಯಾ? ಎಂಬುದು ಅವರ ಮಾತಿನ ಹಿಂದಿ­ರುವ ಭಾವ.
ನಮ್ಮ ಪತ್ರಿಕಾ ವೃತ್ತಿ­ಯಲ್ಲಿ ಇಂತಹ ಹಾಸ್ಯ­ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ­ಯಲ್ಲಿ ಕಂಡ ಕೆಲವು ಜೋಕು­ಗ­ಳನ್ನು ಇಲ್ಲಿ ಬರೆ­ಯು­ತ್ತೇನೆ.
ಘಟನೆ ನಾಲ್ಕು......
ನಾನು ನೋಡಿ­ಕೊ­ಳ್ಳುವ ಜಿಲ್ಲೆಯ ಒಂದು ವರ­ದಿ­ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ­ದಿದ್ದ` ಈ ಊರಿನ ರೈತರ ದ್ರಾಕ್ಷಿ­ಬಿದ್ದು ಕೊಳೆ­ತು­ಹೋ­ಗಿವೆ.
ಘಟನೆ ಐದು....
ಒಂದು ಪತ್ರಿ­ಕೆ­ಯಲ್ಲಿ ಉಪ­ಸಂ­ಪಾ­ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ­ತಿ­ಯನ್ನು ಕೊಂದ­ವ­ಳಗೆ ಒಂಬತ್ತು ತಿಂಗಳು ಸಜೆ'
ಪೇಜ್‌ ಮಾಡು­ವ­ವ­ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ­ಗಿತ್ತು ಅದ­ಕ್ಕಾಗಿ ಅವನು ಹೀಗೆ ಮಾಡಿದ `ಪ­ತಿ­ಯನ್ನು ಕೊಂದ­ವ­ಳಿಗೆ ಒಂಬತ್ತು ತಿಂಗಳು'

ಇಂತಹ ಹಲ­ವಾರು ಬಾಣ­ಗಳ ಸಂಗ್ರಹ ಬತ್ತ­ಳಿ­ಕೆ­ಯ­ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು­ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ.

ಹಾಸ್ಯ (ಸುಮ್ಮನೆ ನಕ್ಕುಬಿಡಿ)5

ನಾಗು ಫೋನ್ ಮಾಡಿದ್ದ...
ಈ ಕೆಲಸಗಳ ಒತ್ತಡ.. ಪುಸ್ತಕ ಬಿಡುಗಡೆಯ ಓಡಾಟ..
ನನಗೂ ಸಾಕು ಸಾಕಾಗಿತ್ತು..ಮೈತುಂಬಾ ಕೆಲಸವಿದ್ದರೂ ಸೀದಾ ನಾಗುವಿನ ಮನೆಗೆ ನಡೆದೆ...

ನಾಗು ನೋಡಿ ನನಗೂ ಖುಷಿಯಾಯಿತು..ಈಗ ಎದ್ದು ಓಡಾಡುತ್ತಿದ್ದ...
ಮುಖದಲ್ಲಿ ಅಶಕ್ತತೆ ಇದ್ದರೂ ನಗುವಿತ್ತು..

"ಏನಪ್ಪಾ ನಾಗು ಚೆನ್ನಾಗಿದ್ದೀಯಾ..? ಹೇಗಿದ್ದೀಯಾ ಈಗ..?"

"ಈಗ ಚೆನ್ನಾಗಿದ್ದೀನಿ..ಯಾಕೋ ಗೊತ್ತಿಲ್ಲ
ನನ್ನ ಜೀವ, ಜೀವನ, ಪ್ರಾಣ ಎಲ್ಲ ಭಾರ ಆಗಿದೆ ಕಣೋ..."

ನನಗೆ ಗಾಭರಿ, ಆತಂಕ ಆಯಿತು...

"ಯಾಕೊ ಹಾಗಂತೀಯಾ..?
ತೊಂದ್ರೆ ಇದ್ರೆ ಹೇಳೊ.. ನಾನಿದ್ದೀನಿ.."

"ಅಯ್ಯೊ.. ಆ ಭಾರ ಎಲ್ಲ ನಾನೇ ಹೊರಬೇಕಪ್ಪಾ...
ಆದ್ರೂ ಜೀವನ ಭಾರ ಜಾಸ್ತಿ ಆಯ್ತು ಕಣೊ.."

ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ ಕೇಳಿಸಿತು...ಸ್ವಲ್ಪ ಜೋರಾಗಿಯೇ ಇತ್ತು...

ನಾಗು ನೋಡಿದೆ.. ಸೊರಗಿ ಹೋಗಿದ್ದ...
ಆಘಾತದಿಂದ ಇನ್ನೂ ಪೂರ್ತಿ ಚೇತರಿಸಿ ಕೊಂಡಿಲ್ಲ ಅನಿಸಿತು...
"ನಾಗು.. ಹೀಗೆಲ್ಲ ಹೇಳಬೇಡ್ವೊ... ಯಾಕೊ ಏನಾಯ್ತು..? "

ಅಷ್ಟರಲ್ಲಿ ನಾಗುವಿನ ಹೆಂಡತಿ ಧುಮು.. ಧುಮು ಅನ್ನುತ್ತ..ನಮ್ಮ ಬಳಿ ಬಂದಳು...

"ಪ್ರಕಾಶಾ...
ಇದು ನನ್ನ ಬಗ್ಗೆ ಹೇಳಿದ್ದು ಕಣೊ...
ಇವರು ನನ್ನ ಬಳಿ ಯಾವಗಲೂ ....
"ನೀನೇ ನನ್ನ ಪ್ರಾಣ...
ನೀನೇ ನನ್ನ ಜೀವಾ...
ನೀನೇ ನನ್ನ ಜೀವನಾ.. ಬದುಕು... ಅಂತಿದ್ದರು...!!
ಈಗ ನನ್ನ ತೂಕ ಜಾಸ್ತಿ ಆಯ್ತು ಅಂತ ಹೀಗೆ ಹೇಳ್ತಿದ್ದಾರೆ.."

ನಾಗು ನಗುತ್ತಿದ್ದ..

ದೇಹಕ್ಕೆ.. ಮನಸ್ಸಿಗೆ ನೋವಿದ್ದರೂ ನಗುತ್ತಿದ್ದಾನಲ್ಲ...!
ಸಾವಿನ ದವಡೆಯವರೆಗೆ ಹೋಗಿ ಬಂದಿದ್ದಾನೆ...!
ಸಾಯುವ ಯಮಯಾತನೆ ಅನುಭವಿಸಿದ ನೋವು ಮುಖದಲ್ಲಿ ಕಾಣುತ್ತಿಲ್ಲ...!

ನಾಗು ನಗುತ್ತಿದ್ದಾನೆ....!!

ನಗುವ ಮನಸ್ಸಿದ್ದರೆ ಹೇಗಿದ್ದರೂ...ನಗಬಹುದು...!
ನಿಜ ಅವನ ಜೀವನ ಭಾರವಾಗಿದ್ದು ಕಾಣುತ್ತಿತ್ತು....

"ಪ್ರಕಾಶು...
ನನಗೆ ವೀಕ್‍ನೆಸ್ಸು ಕಣೊ.. ಹೇಗೆ ಹೊರಲೊ ಈ ಜೀವನ ಭಾರಾನಾ...?
ನನ್ನ ಜೀವನಾ.. ಪ್ರಾಣಾ.. ಎಲ್ಲಾ ಭಾರ ಆಗಿದೆ...
ನಿನ್ನ ಪುಸ್ತಕ ಬಿಡುಗಡೆಗೆ ಬರ್ಲಿಕ್ಕೆ ಟ್ಯಾಕ್ಸಿಗೆ ಹೇಳಿದ್ದೀನಿ ಕಣೊ..
ಮೊದಲಿನ ಹಾಗೆ ಬೈಕಲ್ಲಿ ಆಗಲ್ಲ.."

ನನಗೆ ನನ್ನಾಕೆಯ ನೆನಪಾಯಿತು..ತಕ್ಷಣ ಫೋನಾಯಿಸಿದೆ...
"ಹಲ್ಲೋ..."

"ಏನ್ರಿ...?"

"ಏನಿಲ್ಲ ಕಣೆ...
ನಿನ್ನ ಜೀವನ ಹೇಗಿದೆಯೆ..?
ಭಾರ ಆಯ್ತು ಅಂತ ಅನಿಸ್ತಾ ಇದೆಯಾ...?"

"ಏನ್ರಿ.. ಹೀಗಂತೀರಾ...? ರಾಯರು ಒಳ್ಳೆ ಮೂಡಲ್ಲಿರೊ ಹಾಗಿದೆ..?"

"ಇಲ್ಲಾ ಚಿನ್ನಾ..
ಹೇಳು ನಿನ್ನ ಜೀವನ ಭಾರ ಆಯ್ತು ಅಂತ ಅನಿಸ್ತಾ ಇದೆಯಾ..?"

"ಇಲ್ರೀ... ನೀವಿರುವಾಗ ಎಂಥಾ ಭಾರ ..?
ಎಲ್ಲಾ ಹಗುರ ರೀ....
ನೀವು ಜೊತೆಯಲ್ಲಿರುವಾಗ ಏನು ಭಾರ ಮಾರಾಯ್ರೆ...?
ಎಲ್ಲಾ ಭಾರ ನೀವೇ ಹೊರ್ತಾ ಇದ್ದೀರಲ್ಲಾ..!
ನಂಗೇನು...ನಾನು ಆರಾಮಾಗಿದ್ದೀನ್ರಿ..."

ಹೌದಲ್ವಾ...?

ನಾನು ಫೋನ್ ಕಟ್ ಮಾಡಿದೆ...

ನಿಜ ಅವಳಿಗೇನು? ಜಿಂಕೆ ಹಾಗೆ ಕುಣಿತಾ ಇದ್ದಾಳೆ...!

ಭಾರ ಹೊರ್ತಿರೋದು ನಾನು...!

ಈ ಜೀವನದ ಭಾರ ಕಡಿಮೆ ಮಾಡ್ಕೋ ಬೇಕು ಅನ್ನಿಸ್ತಾ ಇದೆ....!
..................................................................................................................


ಹುಟ್ಟಿದಾಗ ನನ್ನ ತಲೆ ದೊಡ್ಡದಾಗಿತ್ತಂತೆ...
ಡೆಲಿವರಿ ಸಮಯದಲ್ಲಿ ಅಮ್ಮನಿಗೆ ಬಹಳ ಕಷ್ಟವಾಯಿತಂತೆ...

ಹೆರಿಗೆಯ ನೋವು ಊಹೆಗೂ ಮೀರಿದ್ದು...!
ಗಂಡಸರ ಕಲ್ಪನೆಗೆ ಮೀರಿದ್ದು ಅದು...
ಪ್ರತಿ ಹೆರಿಗೆಯಲ್ಲೂ ಮಗುವಿನ ಸಂಗಡ ತಾಯಿಯೊಬ್ಬಳು ಹುಟ್ಟುತ್ತಾಳೆ..
ಮರು ಜನ್ಮ ಪಡೆಯುತ್ತಾಳೆ...

ನೋವಿನಲ್ಲೂ ಸುಖ ಕಾಣುವ ತಾಯಿಯ ಬಗೆಗೆ,
ಹೆಣ್ಣಿನ ಆ ಸ್ವಭಾವದ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅದು ಹೇಗೆ ಸಾಧ್ಯ ಎನ್ನುವ ಕುತೂಹಲವೂ ಇದೆ...

ನಾನು ಹುಟ್ಟಿದ ಮೂರು ತಿಂಗಳಲ್ಲಿ ನನಗೆ ರಿಕೆಟ್ಸ್ ರೋಗ ಆಯಿತು...
ಹುಬ್ಬಳ್ಳಿಯಲ್ಲಿ , ...
ಸಿರ್ಸಿಯ ವಿನಾಯಕ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದ್ದರಂತೆ...

ಬಡಕಲು ಶರೀರ...ಎಲುಬು ಚರ್ಮ...
ತಲೆಯೊಂದು ಮಾತ್ರ ದೊಡ್ಡದು...
ಯಾವಾಗಲೂ ಅಳುತ್ತಿದ್ದನಂತೆ...
ನನ್ನ ಮೈಗೆ "ಕಾಡ್ಳಿವರ್ ಆಯಲ್"
(ಮೀನಿನ ಎಣ್ಣೆ) ಹಚ್ಚಿ ಬೆಳಗಿನ ಬಿಸಿಲಲ್ಲಿ ಮಲಗಿಸುತ್ತಿದ್ದರಂತೆ...
ಸುಮಾರು ಏಳು ವರ್ಷ ಕಾಡಿತ್ತು ಈ ರೋಗ....!

ಅಶಕ್ತತೆಯ ಮಗು, ಕುರೂಪ...
ಎಲುಬು ಚರ್ಮ, ರಕ್ತವಿರದ ...
ಯಾವಾಗಲೂ ರೋಗಿಷ್ಟವಾದ .....
ನಕ್ಕರೂ ಚಂದ ಕಾಣದ ನನ್ನನ್ನು ನನ್ನಮ್ಮ ಎಂದೂ ಅಲಕ್ಷಿಸಲಿಲ್ಲ..

ಪ್ರೀತಿಗೆ ಕೊರತೆ ಮಾಡಲಿಲ್ಲ...
ಯಾವಾಗಲೂ ಮುದ್ದಿಸುತ್ತಿದ್ದರು....
ಎದೆಗೆ ಅವಚಿಕೊಳ್ಳುತ್ತಿದ್ದರು...
"ಚಿನ್ನಾ... ನೀನು ಕೃಷ್ಣನ ಹಾಗಿದ್ದಿಯಾ.." ಅಂತಿದ್ದರು...
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ದೊಡ್ಡವನ್ನನ್ನಾಗಿಸಿದರು...

ನನ್ನ ತಂದೆ ತೀರಿದ ಒಂದು ತಿಂಗಳ ನಂತರ ನಾನು ಹುಟ್ಟಿದ್ದು...
ಪತಿಯ ಅಗಲಿಕೆಯ ನೋವು...
ಹೆರಿಗೆಯ ನೋವು...
ನನ್ನ ಅನಾರೋಗ್ಯ, ಅಶಕ್ತತೆ...,
ಕುರೂಪ...
ಭವಿಷ್ಯದ ಕತ್ತಲು....!
ಇದ್ಯಾವದೂ ಪ್ರೀತಿಗೆ, ಮಮತೆಗೆ ಅಡ್ಡಿ ಬರಲಿಲ್ಲ...

ಯಾವ ತಾಯಿಗೂ ಇವೆಲ್ಲ ಕಾಣಿಸೋದೂ ಇಲ್ಲ....!!

ನೋವಿನಲ್ಲೂ ಸುಖ ಕಾಣುವ ..
ತಾಯಿಯ ಬಗೆಗೆ, ಹೆಣ್ಣಿನ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅಳುವಿನಲ್ಲೂ ನಗ ಬಲ್ಲರು..
ಅವರು ದುಃಖದಲ್ಲೂ ಸುಖ ಕಾಣ ಬಲ್ಲರು.....
ಕುರೂಪದಲ್ಲೂ ರೂಪ ಕಾಣ ಬಲ್ಲರು...ಮಮತೆ ಕೊಡ ಬಲ್ಲರು...!

ಅಂಥಹ ತಾಯಿಗೆ...
ಸಮಸ್ತ ಹೆಣ್ಣುಕುಲಕ್ಕೆ
ಹೆಣ್ಣು ಹೃದಯಗಳಿಗೆ ನನ್ನ ನುಡಿ ನಮನಗಳು...

.............................................................................................................

ಕಳೆದ ಒಂದು ವರ್ಷದಿಂದ ನಾನು ಬ್ಲಾಗ್ ಬರೆಯುತ್ತಿದ್ದೇನೆ...

ನೀವೆಲ್ಲ ಇಲ್ಲಿ ಬಂದಿದ್ದೀರಿ...
ಓದಿದ್ದೀರಿ...

ಕೆಲವೊಮ್ಮೆ ನಕ್ಕಿದ್ದೀರಿ... ದುಃಖವೂ ಆಗಿರ ಬಹುದು...
ಖುಷಿ ಪಟ್ಟಿದ್ದೀರಿ...
ನನ್ನ ಲೇಖನ ಬೋರ್ ಆಗಿ ಬೇಸರ ಪಟ್ಟಿರ ಬಹುದು
ಕೆಲವು ಶಬ್ಧಗಳ ಪ್ರಯೋಗದ ಬಗ್ಗೆ ಬಯ್ದಿರಲೂ ಬಹುದು... !
ಆದರೂ ....
ನನ್ನ ಬೆನ್ನು ತಟ್ಟಿದ್ದೀರಿ... ಸಂತಸ ಪಟ್ಟಿದ್ದೀರಿ... !

ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ... !

ಈ "ಹೇಸರೇ.. ಬೇಡ" ಪುಸ್ತಕ ನನ್ನ ಮಗು..

ಗುಣ ದೋಷ ನನಗೆ ಕಾಣುತ್ತಿಲ್ಲ...
ಬರಿ ಚಂದ ಮಾತ್ರ ಕಾಣುತ್ತಿದೆ...
ಸೊಗಸು ಮಾತ್ರ ನೋಡುತ್ತಿದ್ದೇನೆ...

ತಾಯಿ ಹೃದಯದ ಭಾವ ಅರ್ಥ ಆಗುತ್ತಿದೆ...
ಗುಣ ದೋಷ ಕಂಡರೂ ಕಾಣದಂತಿದ್ದೇನೆ.... !

ಇದೇ ಭಾನುವಾರ ನನ್ನ ಮಗುವನ್ನು ನಿಮ್ಮ ಕೈಗೆ ಇಡುತ್ತಿದ್ದೇನೆ...
ದಯವಿಟ್ಟು ಬನ್ನಿ...
ನನ್ನ ಸಂತಸದ ಕ್ಷಣಗಳವು.... ನಿಮಗಾಗಿ ಕಾಯುತ್ತೇನೆ.... ಬನ್ನಿ...
ಪ್ರೋತ್ಸಾಹಿಸಿ...

ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ... ಬೆಳಿಗ್ಗೆ ಹತ್ತು ಗಂಟೆಗೆ...

ಅಂದು ಏನೇನಿರುತ್ತದೆ...?

ವಾರದ ರಜಾದಿನದದಲ್ಲಿ ಬೆಚ್ಚನೆಯ ಕಾಫೀ...ತಿಂಡಿ...

ಪುಸ್ತಕ ಪ್ರೇಮಿಗಳಿಗೆ ಪುಸ್ತಕದ ಮಳಿಗೆಗಳು..
ಅವಧಿಯ ಎಲ್ಲಾ...ಪುಸ್ತಕಗಳು... !!

ಜಿ. ಎನ್. ಮೋಹನ್ ರವರ ಸೊಗಸಾದ ಮಾತುಗಳು...
ನಗೆಯುಕ್ಕಿಸುವ ಅವರ ಶೈಲಿಯ ಜೋಕುಗಳು...
ನಿಮ್ಮನ್ನು ನಿರಾಸೆ ಗೋಳಿಸಲಾರದು...

ನಾಗೇಶ ಹೆಗಡೆಯರ ಭಾಷಣ...
ಅವರ ಜ್ಞಾನದ, ತಿಳುವಳಿಕೆಯ ಮಾತುಗಳು...
ಅವರೊಂದು ಸಮುದ್ರ....
ಅಂಥಹ ಪರಿಸರ ತಜ್ಞರು ನಮ್ಮೊಂದಿಗೆ ಇರುವದೇ ನಮ್ಮ ಭಾಗ್ಯ...

ಡಾ. ಬಿ. ವಿ. ರಾಜಾರಾಮರ ಮಾತುಗಳು..
ಅವರು ಸೊಗಸಾದ ವಾಗ್ಮಿಗಳು....

ನಗೆ ನಾಟಕಗಳ ಸರದಾರ..
ಯಶವಂತ ಸರದೇಶಪಾಂಡೆಯವ ನಗೆ ಚಟಾಕಿಗಳು...
ಹೊಟ್ಟೆ ಹುಣ್ಣು ತರಿಸುವ ಹಾಸ್ಯಗಳು... ಜೋಕುಗಳು...

ಅಲ್ಲಿಗೆ ಬರುವ ಸಾಹಿತಿಗಳು... ಅನೇಕ ಗಣ್ಯರು.... !

ನಮ್ಮ ಬ್ಲಾಗ್ ಮಿತ್ರರು...
ಅದೊಂದು ಬ್ಲಾಗ್ ಗೆಳೆಯರ ಸಮಾರಂಭ...ಹಲವಾರು ಮಿತ್ರರ ಮುಖ ಪರಿಚಯ ಆಗುತ್ತದೆ...
ಸುಮಾರು ನೂರು ಬ್ಲಾಗ್ ಮಿತ್ರರು ಬರುತ್ತಿದ್ದಾರೆ...!

ನನ್ನ ಕಥನಗಳಲ್ಲಿ ಬರುವ ಪಾತ್ರಗಳು....

ನನ್ನ ಕೆಲಸದ ಒತ್ತಡದಿಂದಾಗಿ ಪ್ರತ್ಯೇಕವಾಗಿ ಕರೆಯಲು ಸಾಧ್ಯವಾಗದಿದ್ದುದಕ್ಕೆ ಕ್ಷಮೆ ಇರಲಿ...

ಬನ್ನಿ ನನ್ನ ಭಾವ ತೋಟಕ್ಕೆ..
ನಿಮಗಾಗಿ ಅಂದು ನಾನು ಕಾಯುತ್ತೇನೆ...

ನಿಮ್ಮೆಲ್ಲರ ..
ಪ್ರತಿಯೊಬ್ಬರ ನಗುವಿಗಾಗಿ ..
ನಾನು, ನನ್ನ ಗೆಳೆಯರು... ನನ್ನ ಕಥನದ ಪಾತ್ರಧಾರಿಗಳು....
ಬಾಗಿಲಲ್ಲಿ ಕಾಯುತ್ತೇವೆ..... ... ಬರುತ್ತೀರಲ್ಲ...??!!

ಒಂದು ರಜಾದಿನ ...
ಬೋರಾಗಿ...
ಎಂದಿನಂತೆ ಮಾಮೂಲಿಯಂತೆ....
ಕಳೆದು ಹೋಗುವ ಮುನ್ನ...ದಯವಿಟ್ಟು ಬನ್ನಿ..

ನಾನು ಸಣ್ಣವನಿದ್ದಾಗಬಹಳ ವೀಕ್ ಆಗಿದ್ದೆ..
ಬಡಕಲು ಕಾಲು, ಕೈಗಳು..
ದೊಡ್ಡದಾದ ತಲೆ...
"ದೊಡ್ಡತಲೆ ಪ್ರಕಾಶ" ಅನ್ನುವ ಅಡ್ಡ ಹೆಸರು ಕೂಡ ನನಗಿತ್ತು...
ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ರೋಗ ಆಗಿತ್ತು...
ಬಹಳ ವೀಕ್ ಆಗಿದ್ದರಿಂದ ಉಳಿದ ಮಕ್ಕಳ ಹಾಗೆ ಆಡಲು ಕಷ್ಟ ಆಗುತ್ತಿತ್ತು...
ನನ್ನ ಪಾದಗಳು ಎಲ್ಲರಂತೆ ಉದ್ದವಾಗಿರದೆ...
ಅಡ್ಡವಾಗಿ ತಿರುಗಿಕೊಂಡಿದ್ದವು...
ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ...
ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ...
ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ...
ಆ ನನ್ನ ಕಾಲುಗಳಿಗೊಂದು ಬೆಳ್ಳಿಯ ಬಳೆ...
ನನ್ನಜ್ಜ ಧರ್ಮಸ್ಥಳಕ್ಕೆ ಹರಕೆ ಹೊತ್ತುಕೊಂಡಿದ್ದನಂತೆ..
ಆ ಬಳೆಗಾಗಿ ಉಳಿದ ಮಕ್ಕಳೆಲ್ಲ ಹಾಸ್ಯ ಮಾಡುತ್ತಿದ್ದರು...
"ಇದು ಸೇರುಗಾರನ ಬಳೆ.." ಅಂತ..
ಬೇಸರವಾಗುತ್ತಿತ್ತು...ನೋವಾಗುತ್ತಿತ್ತು...
ದುಃಖವೂ ಆಗುತ್ತಿತ್ತು...
ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು..
ನನ್ನನ್ನು ಚಾಳಿಸುವ ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು...
ಯಾರ ಬಳಿ ಹೇಳಿಕೊಳ್ಳ ಬೇಕು...?
ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ...
ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು...
ಆಡಲು ಬರದ ಮಕ್ಕಳಿಗೆ
ಯಾರೂ
ಸ್ನೇಹಿತರು ಬರುವದಿಲ್ಲ...
ನಾನಾಗ ನಾಲ್ಕನೆ ತರಗತಿ..
ಒಂದುದಿನ ನನ್ನ ಚಿಕ್ಕಪ್ಪ ಒಂದು ಮಕ್ಕಳ ಪತ್ರಿಕೆ ತಂದುಕೊಟ್ಟರು...
ಈಗಿನ ಪ್ರಖ್ಯಾತ ನಟಿ, ನಿರೂಪಕಿ ಸುಂದರಿ "ಅಪರ್ಣಾ"ರವರ ಮುಖಪುಟದ ಪತ್ರಿಕೆ....!
ಅದು "ಪಾಪಚ್ಚಿ"...! ಅದು ಮಕ್ಕಳ ಪತ್ರಿಕೆ...!
ಅದರಲ್ಲಿರೋ... ಕಥೆಗಳನ್ನು ಓದಿದೆ... ತುಂಬಾ ಚೆನ್ನಾಗಿತ್ತು...
ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು...
ಓದುತ್ತ... ಓದುತ್ತ ಜಗತ್ತನ್ನೇ.. ಮರೆತು ಬಿಟ್ಟೆ...
ಓದುವದು ನನಗೆ ಬಹಳ ಇಷ್ಟವಾಯಿತು...
ಯಾರೂ ನನ್ನೊಂದಿಗೆ ಆಡಲು ಬಾರದ ಸಮಯದಲ್ಲಿ ಪುಸ್ತಕಗಳು ನನಗೆ ಗೆಳೆಯನಾಗಿಬಿಟ್ಟಿತು...
ನನ್ನ ಜೀವನದ ಒಂಟೀತನದಲ್ಲಲ್ಲೆಲ್ಲ ಈ ಗೆಳೆಯ ನನ್ನೊಂದಿಗಿದ್ದಾನೆ..
ಯಾರೂ ಕೊಡದ ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ...
ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ..
ಅಳಿಸಿದ್ದಾನೆ..
ಭಾವದ ಅಲೆಯಲ್ಲಿ ತೇಲಿಸಿದ್ದಾನೆ...!
ನನ್ನಲ್ಲಿದ ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...!
ಎಲ್ಲಿಲ್ಲದ ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...!
ಇಂಥಹ ಸ್ನೇಹಿತನನ್ನು ನನಗೆ ಕೊಟ್ಟ ನನ್ನ ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ಹೇಳಲಿ...?
ಶಬ್ಧಗಳಿಗೆ ಶಕ್ತಿಯಿಲ್ಲ...
ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು....
ನನ್ನ ಪುಸ್ತಕ ನನ್ನ ಚಿಕ್ಕಪ್ಪನಿಗೆ ಅರ್ಪಣೆ....
ನನ್ನ...
ಇಂದಿನ ಸಂತಸ.. ಯಶಸ್ಸೆಲ್ಲ..
ನನ್ನದಲ್ಲ...
ಹಾಗಂತ...ನಿನ್ನದೂ ಅಲ್ಲ..!!
ದಾರಿಗೊತ್ತಿರದ ಬಾಳಲ್ಲಿ..
ಸರಿಯಾಗಿ ನಿಲ್ಲಲೂ ಬಾರದ


ನನ್ನ ಬಾಲ್ಯದಲ್ಲಿ..
ದಿಕ್ಕನ್ನು ತೋರಿದ..
ನಿನ್ನ...ತೋರು ಬೆರಳಿನದು...!
ಚಿಕ್ಕಪ್ಪಾ...
ನನ್ನ ಪುಟ್ಟ ಕೈಗೆ..
ನೀ.... ಕೊಟ್ಟ... ತೋರು ಬೆರಳಿನದು...!!
( ಪ್ರಿಯ ಓದುಗರೆ...
ನನಗಂತೂ ಮೊದಲ ಪ್ರೇಮದ ಸಂಭ್ರಮ... ಸಡಗರ...!
ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. ..
ಇದೇ ಬರುವ ನವೆಂಬರ್ ಹದಿನೈದಕ್ಕೆ..
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ....
ಬಿಡುಗಡೆಯಾಗಲಿದೆ...
ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು...
ಸಹಾಯ ಮಾಡಿ...
ಪ್ರೀತಿಯಿಂದ ಮುನ್ನುಡಿ ಬರೆದು ಕೊಟ್ಟವರು ನಮ್ಮ ಮೆಚ್ಚಿನ ಜಿ. ಎನ್. ಮೋಹನ್ ರವರು
ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ...
ನಮ್ಮೆಲ್ಲರ ಮೆಚ್ಚಿನ ಸುನಾಥ ಸರ್...
ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ...
ನನ್ನ ವ್ಯವಹಾರದ ಕೆಲಸದ ಜೊತೆಗೆ...
ಪುಸ್ತಕ ಸಂಭ್ರಮದ ಖುಷಿ... ಒತ್ತಡ..
ಹೇಗೆ ನಿಭಾಯಿಸುತ್ತೇನೋ.. ಗೊತ್ತಿಲ್ಲ...
ನಿಮಗೆಲ್ಲ ಪ್ರತ್ಯೇಕವಾಗಿ ಕರೆಯುತ್ತೇನೆ...
ಬರುತ್ತೀರಲ್ಲ..!
ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...?
ನೀವು ಅಲ್ಲಿ ಬಂದಾಗ ನಗಿಸಲು ಸ್ಪೆಷಲ್ ಗೆಸ್ಟ್ ಬರಲಿದ್ದಾರೆ...!
ಸ್ನೇಹಿತ ಶಿವುರವರ "ವೆಂಡರ್ ಕಣ್ಣು"..
ಗೆಳೆಯ ದಿವಾಕರನ ನಾಟಕಗಳು "ಉದ್ಧಾರ ಮತ್ತು ಸಂತೆ"
ನನ್ನ ಪುಸ್ತಕದ ಹೆಸರು...
" ಹೆಸರೇ.. ಬೇಡ..!!..."
ಈ ಹೆಸರು ಕೊಟ್ಟವರು ಯಾರು...?
ಹೇಗೆ ಬಂತು ಈ ಹೆಸರು..?
ನಿಮ್ಮನ್ನು ನಗಿಸಲು ಬರುವ ಸ್ಪೆಷಲ್ ಗೆಸ್ಟ್ ಯಾರು...?
ಇನ್ನು ನಾಲ್ಕಾರು ದಿನಗಳಲ್ಲಿ ಹೇಳುವೆ....
ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...)
ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದೆ...

ಸಿರ್ಸಿಯಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗ ಬೇಕಿತ್ತು...

"ಅಣ್ಣಾ... ಸಿರ್ಸಿಗೆ ಹೋಗಿ ಬರ್ತೇನೆ...
ಏನಾದ್ರೂ ಸಾಮಾನು ತರುವದು ಇದೆಯಾ..?"

ಪೇಟೆಗೆ ಹೋಗುವ ಮುನ್ನ ಹೀಗೆ ಕೇಳುವದು.. ವಾಡಿಕೆ...

"ತರಕಾರಿ ತರಬೇಕಿತ್ತು.. ಮಾರಾಯ ..
ನಿನ್ನ ನೋಡಿದರೆ....
ಸಾಮಾನಿನ ಬೆಲೆ ಜಾಸ್ತಿ ಹೇಳಿ ಹೆರೆದು ಬಿಡ್ತಾರೆ..
ಕಾನಸೂರಿನಲ್ಲಿ ಹೆಗಡೇರ ಅಂಗಡಿಯಲ್ಲಿ ಹೇಳಿಟ್ಟಿದ್ದೇನೆ...
ಆ ಸಾಮಾನು ತಗೊಂಡು ಬಾ..."

ನಾನು ಸರಿ ಎಂದೆ...

"ಹೋಗುವಾಗ ಕುಷ್ಟನೂ... ಬರ್ತಾನೆ..
ಅವನಿಗೆ ಆರೋಗ್ಯ ಸರಿ ಇಲ್ಲಂತೆ ಕರೆದು ಕೊಂಡು ಹೋಗು.."

ಕುಷ್ಟನಿಗೂ ಖುಷಿಯಾಗಿತ್ತು..!!

"ಸಣ್ಣ ಹೆಗಡೇರೆ.. ನಿಮ್ಮ ಸಂಗಡ ಕಾರಲ್ಲಿ ಹೋಗಬೇಕು ಅಂತ ಆಸೆ ಇತ್ರ..
ಇವತ್ತು ಪೂರ್ತಿ ಆಯ್ತು ನೋಡಿ... ."

ನಾನೂ ಕುಷ್ಟನೂ ಲೋಕಾಭಿರಾಮವಾಗಿ ಮಾತನಾಡುತ್ತ.. ಸಿರ್ಸಿ ಹತ್ತಿರ ಬಂದೆವು...

"ಕುಷ್ಟ ನಿನಗೆ ಯಾವ ಡಾಕ್ಟರ್ ಹತ್ತಿರ ಹೋಗಬೇಕು..? ಏನಾಗಿದೆ..?"

ಕುಷ್ಟ ಸ್ವಲ್ಪ ನಾಚಿಕೊಂಡ...

"ಪಕಾಸ್ ಹೆಗ್ಡೇರೆ... ನಂಗೆ ಸಾಮಾನು ಡಾಕ್ಟರ್ ಹತ್ರ ಹೋಗಬೇಕ್ರಾ..!"

ನನಗೆ ಅಶ್ಚರ್ಯವಾಯಿತು...!!

" ಸಾಮಾನಿನ ಡಾಕ್ಟರ್ರಾ.??.?
ಯಾರು ಅದು..?"

" ಅದೇರ್ರಾ...
ನಿನ್ನೆ ಬೆಟ್ಟದಿಂದ ಇಳಿಯುವಾಗ ಬಿದ್ದು..
ನನ್ನ ಸಾಮಾನಿಗೆ ಪೆಟ್ ಆಗಿದೆರ್ರಾ..
ನಟರಾಜ್ ರೋಡಿನಲ್ಲಿ ಇದ್ದರಲ್ರಾ.." ನಾಯಕ್ ಡಾಕ್ಟ್ರು."...
ಅವ್ರು ಸಾಮಾನು ಡಾಕ್ಟ್ರಂತೆ.. ಅವರ ಬಳಿ ಹೋಗುವಾ ಅಂತ..
ಒಳ್ಳೆ ಔಷಧ ಕೊಡ್ತಾರಂತೆ.."

ನನಗೆ ಈಗ ಅರ್ಥವಾಯಿತು...

ನಾನು ಅವನನ್ನು ಆಲ್ಲೇ ಬಿಟ್ಟು... ನನ್ನ ಸ್ನೇಹಿತ ಮೂರ್ತಿಯನ್ನು ನೋಡಲು ಹೊರಟೆ..
ಸಿರ್ಸಿ ಬಸ್ಟಾಂಡಿನ ಹತ್ತಿರ ಅವನ ಅಂಗಡಿ ಇದೆ...

ಕಾಲೇಜು ದಿನಗಳಲ್ಲಿ ಅವನ ಅಂಗಡಿ ನಮ್ಮ ಅಡ್ಡವಾಗಿತ್ತು....

ಮೂರ್ತಿಗೆ ತುಂಬಾ ಖುಷಿ ಆಯ್ತು...
ತುಂಬಾ ದಿನಗಳಾಗಿತ್ತು ಭೇಟಿಯಾಗದೆ..

"ಮೂರ್ತಿ.. ಚೆನ್ನಾಗಿದ್ದೀಯಾ...? ಹೇಗಿದೆ ಬಿಸಿನೆಸ್...?
ಹಬ್ಬ ಜೋರಾ..?"

"ಏನಿಲ್ಲ .. ಪ್ರಕಾಶು...... .
ನಾಳೆ ದೀಪಾವಳಿ.. ಆಯುಧ ಪೂಜೆ..
ಕೆಲಸಗಾರರು ಎಲ್ಲಾ ಸಾಮಾನು ತೊಳೆದು ಇಡ್ತಾ ಇದ್ದಾರೆ..
ನಾಳೆ ಎಲ್ಲಾ ಸಾಮಾನಿಗೂ ಪೂಜೆ ಮಾಡ್ಬೇಕಲ್ಲಾ..
ಅಲ್ಲಾ ಬೆಂಗಳೂರಲ್ಲಿ ಪೂಜೆ ಯಾವಾಗಾ..?
ಅಲ್ಲಿ ಸಾಮಾನುಗಳ ಪೂಜೆ ಎಲ್ಲಾ ಇದೆಯಾ..?"

ನಂಗೆ ನಗು ಬಂತಾದರೂ ತಡೇದು ಕೊಂಡೆ...

"ಬೆಂಗಳೂರಲ್ಲಿ ಆಯುಧ ಪೂಜೆ ನವರಾತ್ರಿಯಲ್ಲಿ ಮಾಡ್ತಾರೆ"

ಮೂರ್ತಿ ನಕ್ಕ...ನಂಗೂ ತಡೆದು ಕೊಳ್ಳಲಾಗಲಿಲ್ಲ..
ಇದೇ ಸಂದರ್ಭ ಅಂತ ಜೋರಾಗಿ ನಕ್ಕು ಬಿಟ್ಟೆ...

ಅಷ್ಟರಲ್ಲಿ ಮೂರ್ತಿ ಗೆಳೆಯ ಗುರು ಬಂದ... ಅವರದು ಹಾರ್ಡ್‍ವೇರ್ ಅಂಗಡಿ ಇದೆ...

"ಮಾರಾಯಾ.. ನಾಳೆ ಪೂಜೆಗೆ ಅಂತ ಸಾಮಾನು ತೊಳಿತಾ ಇದ್ದೆ..

ಎಲ್ಲ ಸಾಮಾನು ಯಾಕೆ ತೊಳಿಬೇಕು..?

ಶಾಸ್ತ್ರಕ್ಕೆ ಅಂತ ಒಂದೆರಡು ತೊಳೆದು ಪೂಜೆ ಮಾಡಿದ್ರೆ ಆಗಲ್ವಾ..?
ಹೀಗೆಲ್ಲ ತೊಳೆದರೆ ಕೆಲವು ಹಳೆ ಸಾಮಾನಿಗೆ ಜಂಗ್ ಹಿಡಿದು ಬಿಡ್ತದೆ..

ಹಳೆ ಸಾಮಾನಿಗೆಲ್ಲಾ ಯಾಕಪ್ಪಾ ಪೂಜೆ...?

ನನ್ನಪ್ಪನಿಗೆ ಹೇಳಿದ್ರೆ ಕೇಳ್ತಾಇಲ್ಲ.. ಮಾರಾಯಾ...
ವರ್ಷಕ್ಕೊಮ್ಮೆ ಆದ್ರೂ ಸಾಮಾನಿಗೆ ನೀರು ಹಾಕಿ ತೊಳಿಬೇಕು ಅಂತ ಹಠ ...
ಅವರ ಹತ್ರ ಎಂತಾ ಜಗಳ ಅಂತ ಈ ಕಡೆ ಬಂದೆ.."

ನನಗೆ ಅಲ್ಲಿ ನಿಲ್ಲಲಾಗಲಿಲ್ಲ...

ಕೆಲಸ ಎಲ್ಲ ಮುಗಿಸಿ ಕುಷ್ಟನನ್ನು ಕರೆದು ಕೊಂಡು ಕಾನಸೂರಿಗೆ ಹೊರಟೆ..

"ಏನಾಯ್ತು ಕುಷ್ಟ..? ಡಾಕ್ಟ್ರು ಏನು ಹೇಳಿದ್ರು..?"

"ಪಕಾಸ್ ಹೆಗ್ಡೇರೆ.. ಈ ಡಾಕ್ಟ್ರು ಸರಿ ಇಲ್ರ..
ಎಂತಾ .... ಮರ್ಯಾದಿ ಇಲ್ಲದ ಜನ ಮಾರಾಯ್ರೆ...?
ರಾಮ...ರಾಮಾ...!... ನಂಗೆ ನಾಚಿಕೆ .. ಮರ್ವಾದಿ, ಎಲ್ಲಾ ತೆಗೆದು ಬಿಟ್ರು...
ಅದೆಲ್ಲ ...ಹೇಳೂಕೆ ನಾಚ್ಕೇರ್ರಾ....!

ಡಾಕ್ಟ್ರ ಹತ್ರೆ ಮರ್ಯಾದಿ ಇಟ್ಕೋ ಬಾರ್ದು ಅಂತ ಉಪದೇಸ ಬೇರೆ ಕೊಟ್ರು..
ಈ ಔಷಧ ತಗೊ.., ಎರಡು ದಿನ ಬಿಟ್ಟು ಮತ್ತೆ ಬಾ ಅಂತ ಹೇಳಿದ್ರು.."

"ಹಾಗೆ ಮಾಡು ಎರಡು ದಿನ ಬಿಟ್ಟು ಮತ್ತೆ ಹೋಗಿ ಬಾ.."

" ಇಷ್ಟು .. ಮರ್ಯಾದಿ ಹೋಗಿದ್ದು ಸಾಕ್ರ...

ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?
ಲಂಚ ಕೇಳೋ.. ಆಫಿಸರ್ನಾ...?
ಕೈಲಿ ಆಗೂದಿಲ್ರ...!
ನನ್ನ ಮಗನ್ನ ಕಳಸ್ತೆ.. ಔಷಧಿ ತರ್ಲಿಕ್ಕೆ.."

"ಅವರು "ತಪಾಸಣೆ" ಮಾಡಿ ಔಷಧ ಕೊಡ ಬೇಕಾಗ್ತದೆ...
ಪೆಟ್ಟಾಗಿದ್ದು ನಿಂಗೆ..
ನೀನೇ ಹೋಗಬೇಕು ಮಾರಾಯಾ.."

"ನನ್ನ ಮಗ ಸಣ್ಣವ...ಸರಿ..
ನಮ್ ಪಕ್ಕದ ಮನೆ ನಾಣಿ ಕಳಸ್ತೆ...
ನಂಗೆ ಹೀಗ್ ಹೀಂಗೆ ಆಗ್ತದೆ ಅಂತ ಅವ ಡಾಕ್ಟ್ರ ಹತ್ರ ಹೇಳ್ತಾನೆ..
ಅಲ್ರಾ... ಕಾಮತ್ರು ನಂಗೆ ಮಂತ್ರಿಸಿ ಕೊಡ್ಬೇಕಾದ್ರೆ...
ನನ್ನ ಮಗನ್ನ ಕಳಸ್ತಿದ್ದೆ..
ಕಾಮತ್ರ್‍ ಗೆ ಆಯ್ತದೆ... ಡಾಕ್ಟ್ರಿಗೆ ಆಗೋದಿಲ್ವ..?
ಕಾಮತ್ರು ಎಷ್ಟು ದೊಡ್ಡ ಜನಾ...? ಏನು ಕಥೆ..?
ಕಾಮತ್ರ ಯೋಗ್ಯತೆ ಇದೆಯಾ ಇವರಿಗೆ...?
ಮಂತ್ರ ಹೇಳಿ ಗಂಡು ಮಗನ್ನ ಕೊಡ್ಸಿದವ್ರು..!!!
ಅವ್ರಿಗಿಂತ ದೊಡ್ಡವ್ನ... ಈ ಡಾಕ್ಟರ್ರು...?? "
" ಇಲ್ಲಪ್ಪಾ ನೀನೇ ಹೋಗ್ಬೇಕು..."

"ಉಪದೇಸ ... ಮಾಡಿದಂಗೆ ಅಲ್ಲ ಮರ್ವಾದಿ ಕಳ್ಕೊಳ್ಳದು..
ಮರ್ವಾದಿ ಕಳೊಂಡವ್ನಿಗೆ ಗೊತ್ತು..ಅದು ಏನು ಅಂತ...
ನಿಮಗೇನು ಗೊತ್ತು ನನ್ ಕಷ್ಟ...?
ಈ... ಡಾಕ್ಟ್ರು ಸ್ವಲ್ಪ ಮಳ್ಳು..ಮಾರಾಯ್ರೆ....

ನೆಗಿ ಆಡ್ತಾರ್ರೇ ಮಾರಾಯ್ರೆ..
ನನ್ನ ನೋಡಿ ಕಿಸಿ ಕಿಸಿ ನಗ್ತಾರೆ..."

"ನೋಡು... ಕುಷ್ಟ ..
ಕಡಿಮೆ ಆಗದೇ ಇದ್ರೆ ನೀನೇ... ಹೋಗಬೇಕು..
ಕೆಲವೊಂದು ನಿನಗೆ ಗೊತ್ತಾಗುದಿಲ್ಲ..
ನಾನು ಹೇಳಿದ್ದು ಕೇಳು..
ನಿನ್ನ ಪಕ್ಕದ ಮನೆ ಯಂಕನಿಗೆ ಏನಾಯ್ತು...?

ಅದೇ ನೋವಲ್ಲಿ ಕೊನೆಗೆ..ಸತ್ತು ಹೋದ..
ನಾಚ್ಕೆ ಮಾಡ್ಕೊಂಡು..!

ಬದುಕಿ ಉಳಿದರೆ ನಾಚ್ಕೆ, ಮರ್ಯಾದಿ...ಎಲ್ಲಾ ..!

ಇದಕ್ಕೆಲ್ಲ ಇದಕ್ಕೆಲ್ಲ ನಾಚಿಕೆ ಇಟ್ಗೋಬೇಡ....."

"ಆಯ್‍ತ್ರ.. ಹಾಂಗೇ ಮಾಡ್ತೆ.."
ಕಾನಸೂರು ಹೆಗಡೇರ ಅಂಗಡಿಗೆ ಬಂದೆವು...

ಅದು ಸುತ್ತ ಮುತ್ತಲಿನ ಹಳ್ಳಿಗರ ಅಡ್ಡ...

ಅಲ್ಲಿ ಕಲ್ಕಟ್ಟೆ ಗೋವಿಂದಣ್ಣ ಸಿಕ್ಕಿದ...
ಅವ ಹಳೆ ದೋಸ್ತ...

"ಅರೇ... ಪ್ರಕಾಶಾ... ಆರಾಮಾ..?
ಸಿರ್ಸಿಗೆ ಬಂದಿದ್ದಾ?"

" ಹೌದು ಮಾರಾಯಾ... ಏನು ವಿಶೇಷ..?"

"ಏನೂ ಇಲ್ಲ ಮಾರಾಯಾ..!
ನಿನ್ನೆ ಸಿರ್ಸಿಯಲ್ಲಿ ಒಂದು ಭಾನಗಡಿ ಘಟನೆ.. ಆಯ್ತು.."

"ಏನಾಯ್ತು...!!.?"

" ಬಸ್ಟಾಂಡಲ್ಲಿ ಎಲ್ಲಕಡೆ ಬರೆಸಿ ಇಟ್ಟಿದ್ದಾರೆ...

" ನಿಮ್ಮ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು.."

" ಸಾಮಾನು ಕಳ್ಳರಿಂದ ಎಚ್ಚರಿಕೆಯಿಂದ ಇರಬೇಕು ಅಂತ..."

"ಅದು.. ನಿಜ ಏನಾಯ್ತು.!!.?"

" ಅಮ್ಮಚ್ಚಿ ಮಂಜಣ್ಣ ತನ್ನ ಸಾಮಾನು ...
ಅಲ್ಲೇ ಕಲ್ಲು ಬೇಂಚಿನ ಮೇಲಿಟ್ಟು ಒಳಗಡೆ ಹೋಟ್ಲಿಗೆ ಹೋಗಿದ್ನಂತೆ..

ಚಹ ಕುಡಿದು ಬರುವಷ್ಟರಲ್ಲಿ ಮಂಜಣ್ಣನ ಸಾಮಾನು ಮಾಯಾ..!!

ಕಳ್ಳರು ಅವನ ಸಾಮಾನು ಎತ್ತಿಕೊಂಡು ಹೋಗಿ ಬಿಟ್ಟಿದ್ರು..!!!."

ಗೋವಿಂದಣ್ಣ ಬಹಳ ಬೇಸರ ಪಟ್ಟುಕೊಂಡ...

" ಕಾಲ ಕೆಟ್ಟು ಹೋಯ್ತು ಪ್ರಕಾಶ...!!

ಈ ಕಳ್ಳ ಜನ ಎಂತಹ ಸಾಮಾನ್ನೂ ಬಿಡೋದಿಲ್ಲ.. ಮಾರಾಯಾ..."

ಅಷ್ಟರಲ್ಲಿ ಕುಷ್ಟ ಬಾಯಿ ಹಾಕಿದ...

" ಸಾಮಾನು ಕಳ್ರು ಎಲ್ಲ ಕಡೆ ಇರ್ತಾರ್ರ...
ನಮ್ಮ ಸಾಮಾನು ಬಗ್ಗೆ ನಾವು ಎಚ್ಚರಿಕೆಯಲ್ಲಿ ಇರಬೇಕ್ರ...

ನಂಗೆ ....ಇದು ಮಾತ್ರ ಅರ್ಥ ಆಗೂದಿಲ್ರಾ...!

ಅಲ್ಲಾ.. ಈ.. ಮಂಜಣ್ಣ...!!
ತಮ್ಮ ಸಾಮಾನು...ಯಾಕೆ.. ...ಹೊರಗೆ ಇಟ್ಟು ಹೋದ್ರು..?? !!...?"
(ಕುಷ್ಟನ ಕಥೆಯನ್ನು ಕಿರು ಚಿತ್ರ ಮಾಡಿದರೆ ಹೇಗೆ..?
ನಮ್ಮ ಪ್ರತಿಭಾನ್ವಿತ ಸ್ನೇಹಿತರಾದ ಹೇಮಂತ್ ಕೇಳುತ್ತಿದ್ದಾರೆ..
ಖುಷಿಯಾಗುತ್ತಿದೆ....

ಹಾಸ್ಯಗಳು 4

ಹಾಸ್ಯಗಳು
ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು?
ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್.
ಅಧ್ಯಾಪಕರು- ಇದನ್ನೇ ಇಂಗ್ಲೀಷ್ನಲ್ಲಿ ಉತ್ತರಿಸು.
ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ."
------------------------------------------------------------------------------------------------
ನಿದ್ದೆಯ ಗುಂಗಿನಲ್ಲಿದ್ದ ಗುಂಡನಿಗೆ ಎಬ್ಬಿಸಿದ ಗುಂಡನ ಹೆಂಡತಿ--
"ರ್ರೀ..."ಹ್ಯಾಪಿ ಬರ್ತ್*ಡೆ ಟೂ ಯೂ" ...ನಿಮ್ಮ ಬರ್ತ್*ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ.."
ಗುಂಡನಿಗೆ ಆಶ್ಚರ್ಯವಾಯ್ತು..." ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ.."
" ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ.."!!
---------------------------------------------------------------------------------------------------
ವರನ ತಂದೆ : " ಏನು ಓದಿದೀಯಮ್ಮಾ...?"
ಕನ್ಯಾ: " ಬಿ.ಎಸ್ಸಿ. ಓದಬೇಕಿತ್ತು....ಆದ್ರೆ...!"
ವರನ ತಂದೆ: " ಆದ್ರೆ ಏನಾಯ್ತಮ್ಮಾ..?
ಕನ್ಯಾ: " ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಡ್ಡ ಬಂದ್ಬಿಡ್ತು...!"
---------------------------------------------------------------------------------------------------
ಸಂತ ; ಕತ್ರೀನಾ ಕೈಫ್ ನನ್ನನು ಮದುವೆ ಆಗೋಕೆ ಒಪ್ಪಿಕೊಂಡ ಬಿಟ್ಲು ...........
ಬಂಟ ;ಅಸ್ತೆಲ್ಲ ಆಸೆ ಇಟ್ಕೋ ಬೇಡ ನಾನು ಡೈವೋರ್ಸ್ ಕೊಟ್ರೆ ತಾನೆ ಅವ್ಳು ನಿನ್ನ ಮದುವೆ ಆಗೋದು .......
---------------------------------------------------------------------------------------------------
ಹೊಸದಾಗಿ ಬಂದ ಸೊಸೆಗೆ ಅಡಿಗೆ ಗೊತ್ತಿಲ್ಲ ,
ಬುಕ್ ನೋಡಿ ಮಾಡ್ತಾ ಇದ್ಲು
ಅತ್ತೆ : ಏನಮ್ಮ ಚಪಾತಿ ಹಿಟ್ಟಿ ನ ಮೇಲೆ ದೇವರ ಗಂಟೆ ಯಾಕ್ ಇಟ್ಟಿದಿಯ??
ಸೊಸೆ : ಬುಕ್ ನಲ್ಲಿ ಕೊಟ್ಟಿದಾರೆ ಹಿಟ್ ಕಲಸಿ ಒಂದು ಗಂಟೆ ಇಡಿ ಅಂತ ಅದಕ್ಕೆ,.
---------------------------------------------------------------------------------------------------
ರಾತ್ರಿ ಮಲಗಬೇಕಾದ್ರೆ ಸೊಳ್ಳೆ ಕಡಿಯುವುದನ್ನು ತಡೆಯಬೇಕೆ ?
ಹಾಗಿದ್ದಲ್ಲಿ ಒಂದು ಒಳ್ಳೆಯ ಉಪಾಯ,
ಸೊಳ್ಳೆಗಳೆಲ್ಲಾ ಮಲಗಿದ ಮೇಲೆ ನೀವು ಮಲಗಿ. ಹ್ಹ ಹ್ಹ ಹ್ಹ !!!
---------------------------------------------------------------------------------------------------
ಅಮ್ಮ - ಪುಟ್ಟ ಆಂಟಿಗೆ ಒಂದು ಕಿಸ್ ಕೊಡು, ಅವರು ಊರಿಗೆ ಹೋಗ್ತಾರೆ ?
ಪುಟ್ಟ - ನಾನು ಕೊಡಲ್ಲ....
ಅಮ್ಮ - ಯಾಕೋ ?
ಪುಟ್ಟ - ನಿನ್ನೆ ಅಪ್ಪ ಕೊಡೋಕೆ ಹೋದಾಗ ಆಂಟಿ ಕೆನ್ನೆಗೆ ಹೋಡೆದ್ರು. ಗೊತ್ತಾ ?
----------------------------------------------------------------
೧. ಹೆಚ್ಚಿನ ಸಂಬಂಧಗಳು ಪ್ರೀತಿಯ ಕೊರತೆಯಿಂದ ಸೋಲುವದಿಲ್ಲ...
ಪ್ರೀತಿ ಯಾವಾಗಲೂ ಇರುತ್ತೆ...
ಆದ್ರೆ ಒಬ್ಬರು ತುಂಬಾ ಪ್ರೀತಿ ಮಾಡ್ತಾರೆ, ಮತ್ತು
ಇನ್ನೊಬ್ಬರು ತುಂಬಾ ಮಂದಿನಾ ಪ್ರೀತಿ ಮಾಡ್ತಾರೆ.
-------------------------------------------------------------------------------------------------------
೨. ಬಹಳ ಹಿಂದೆ,
ತನ್ನ ನಿದ್ದೆಯನ್ನು ತ್ಯಾಗ ಮಾಡಿದವರಿಗೆ, ಕುಟುಂಬವನ್ನು ಮರೆತವರಿಗೆ, ಊಟ-ತಿಂಡಿ ಮರೆತವರಿಗೆ, ನಗುವದನ್ನು ಮರೆತವರಿಗೆ ಸನ್ಯಾಸಿಗಳೆಂದು ಕರೆಯುತ್ತಿದ್ದರು.
ಆದರೆ ಅವರಿಗೆ ಈಗ ಸಾಫ್ಟ್ವೇರ್ ಇಂಜನಿಯರು ಎಂದು ಕರೆಯುತ್ತಾರೆ.
-------------------------------------------------------------------------------------------------------
೩. ಒಬ್ಬ ಬೈಕ್ ಚಾಲಕನ ಟಿ-ಶರ್ಟ್ ಹಿಂದೆ ಬರೆದ ಬರಹ
"ನಿಮಗೆ ಇದನ್ನು ಓದಲು ಸಾಧ್ಯವಾಗಿದ್ದರೆ, ದಯವಿಟ್ಟು ನನ್ನ ಗರ್ಲ್ ಫ್ರೆಂಡ್ ಕೆಳಗೆ ಬಿದ್ದಿದ್ದಾಳೆಂದು ನಂಗೆ ತಿಳಿಸಿ."
------------------------------------------------------------------------------------------------------
೪. ಕೆಲಸಗಾರ: ಬಾಸ್ ನಾನು ಮದ್ವೆ ಆಗಿದೀನಿ ಸಾರ್...! ನನ್ನ ಸಂಬಳ ಜಾಸ್ತಿ ಮಾಡಿ ಪ್ಲೀಸ್..!
ಬಾಸ್: ನಮ್ಮ ಕಂಪನಿ ಹೊರಗೆ ಆಗಿರೋ ಆಕ್ಸಿಡೆಂಟ್ ಗಳಿಗೆ ಜವಾಬ್ದಾರರಲ್ಲ..!
-------------------------------------------------------------------------------------------------------
೫. ಒಂದು ಸಾಫ್ಟ್ವೇರ್ ಕಂಪನಿಯ ಮುಂದೆ ಇದ್ದ ಸೈನ್ ಬೋರ್ಡ್...
ನಿದಾನವಾಗಿ ಡ್ರೈವ್ ಮಾಡಿ, ನಮ್ಮ ನೌಕರರನ್ನು ಕೊಲ್ಲ ಬೇಡಿ....
......ಅವರನ್ನು ನಮಗೆ ಬಿಡಿ
------------------------------------------------------------------------------------------------------
೬. ಹುಡುಗ: ನಿಮ್ಮ ಹತ್ರ ಸೆಂಟಿಮೆಂಟಲ್ ಲವ್ ಥೀಮ್ ಇರೋ ಕಾರ್ಡ್ಸ್ ಇದ್ಯಾ?
ಶಾಪ್ ಕೀಪರ್: ಒಹ್ ಖಂಡಿತ...! "ಜೀವನದಲ್ಲಿ ನಾನು ಪ್ರೀತಿಸಿದ ಒಂದೇ ಒಂದು ಹುಡುಗಿಗೆ..!" ಈ ಕಾರ್ಡ್ ಹೇಗಿರುತ್ತೆ?
ಹುಡುಗ: ವಾವ್ ಸುಪರ್ ಆಗಿದೆ..., ನಂಗೆ ಹತ್ತು ಕಾರ್ಡ್ ಕೊಡಿ..

ಕ್ಯಾಲೆಂಡರ್ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ.
ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ
ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ
ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ
ದೇವರ ಮೇಲೆ ಭಾರಅಪ್ಪ : ಲೇ ಯಾಕೋ ದೇವರ ಮೇಲೆ ಕಲ್ಲು ಎತ್ತಿ ಇಟ್ಟಿದ್ದೀಯಾ?
ಮಗ : ದೇವರ ಮೇಲೆ ಭಾರ ಹಾಕಿ ಎಕ್ಸಾಮ್ ಗೆ ಹೋಗು ಅಂತ ಅಮ್ಮ ಹೇಳಿದ್ದಾರೆ
ಇರುವೆಗೆ ಹಾಕೋ ಪೌಡರ್ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ
ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ
ಫ್ಯಾಮಿಲಿ ಕಳ್ಳಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ?
ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ.
ಕರೆಂಟ್ ಹೋದ್ರೂನು ಉರಿಯುವ ದೀಪಸರ್ದಾರ್ : ಕರೆಂಟ್ ಆಪ್ ಆದ್ರೂನು ಸ್ವಲ್ಪ ಹೊತ್ತು ಉರಿಯೋತರ ಒಂದು ಬಲ್ಪ್ ಕೊಡಿ.
ಸೇಲ್ಸ್ ಮ್ಯಾನ್ : ಅದು ಹೇಗೆ ?
ಸರ್ದಾರ್ : ಫ್ಯಾನ್ ಆಪ್ ಅದ್ರು ಸ್ವಲ್ಪ ಹೊತ್ತು ಸುತ್ತುತ್ತಲ್ಲ ಹಾಗೇನೆ 
ಬಸ್ಸಿನಲ್ಲಿ ಯುವಕನೊಬ್ಬನ ಮುಂದೆ ಹರೆಯದ ಹುಡುಗಿ ನಿಂತಿದ್ದಳು. ಬ್ರೇಕ್ ಹಾಕಿದಾಗೆಲ್ಲ ಅವಳ ಮೊಲೆಗಳು ಅವಳು ಒತ್ತಿ ಹಿಡಿದಿದ್ದ ಕಂಬಿಗೆ ಒತ್ತುತ್ತಿದ್ದವು. ಯುವಕ ಹೇಳಿದ, “ಮೇಡಮ್, ನಿಮ್ಮ ಮೂಸಂಬಿಗಳು ಹುಷಾರು, ಬ್ರೇಕ್ ಹಾಕಿದಾಗೆಲ್ಲ ಹಾಳಾಗ್ತಿದಾವೆ ಪಾಪ”
ಹುಡುಗಿ ಹೇಳಿದಳು, “ನನ್ನ ಮೂಸಂಬಿಗಳು ತಾನೆ, ನಿಮಗೇನಾಗ್ಬೇಕು ಅದರಿಂದ ?”
ಯುವಕ ಹೇಳಿದ, “ಮೂಸಂಬಿ ನಿಮ್ಮವಿರಬಹುದು ಮೇಡಮ್, ಆದ್ರೆ ಸೋರಿಹೋಗ್ತಿರೋದು ನನ್ನ ರಸ, ಅದ್ಕೇ ಕೇಳಿದೆ”
ಕಚಗುಳಿ ಇಡುವ ಹಾಸ್ಯಗಳು
ಮೊದಲ ಪರಿಣಾಮ ಗಂಡನಿಗೆ
ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ
ಹೆಂಡತಿ ಉಣ್ಣುತ್ತಾಳೆ ಯಾಕೆ?
ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,
ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ.
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ
ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು
ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ
ಸಜ್ಜನನೊಬ್ಬನು ಅವನನ್ನು ತಡೆದು,
ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.
ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.
ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ
ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ
ತೂರಾಡಿಕೊಂಡೇ ಮುನ್ನಡೆದ.
ಪ್ರೀತಿ ಕಡಿಮೆ ಆಗ್ತಾ ಇದೆ
ರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ
ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ.
ಉಮಾ-- ಹೇಗೆ ಹೇಳುತ್ತಿ?
ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು,
ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ."
ಪಂಚರ್ ಆಗಿದೆ .
ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ .
ಒಹ್ ಅತ್ತೆ ಮಾವ
ಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ.
ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ.....
ಕಂಪನಿಯ ಗೇಟಿನಲ್ಲಿ ತಗುಲಿಹಾಗಿದ ಬೋರ್ಡ್ ಹೀಗಿತ್ತು . Wanted Helpers ( Not Allowed Recomed Person Put Derict Application ) ಇದನ್ನು ಓದ್ದಿದ ಓಬ್ಬ ತರುಣ ತನ್ನ Application formನ್ನು ಒಂದು ಕಲ್ಲಿನಲ್ಲಿ ಸುತ್ತಿ ಎದುರಿಗೆ ಕಾಣುತಿದ್ದ ಗಾಜಿನ ಆಫೀಸಿಗೆ  ತುರಿದ ಆಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಓಡಿ ಬಂದು ಆ ತರುಣನ್ನು  ವಿಚಾರಿಸಿದಾಗ ತರುಣನೆಂದ ಬೋರ್ಡನ್ನು ಸರಿಯಾಗಿ ಓದಯ್ಯ ...........................
ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ

ಹಾಸ್ಯ (ಸುಮ್ಮನೆ ನಕ್ಕುಬಿಡಿ)3

Democracy ಅಂದ್ರೆ
Democracy ಅಂದ್ರೆ ::::::::
OFF THE PEOPLE
BUY THE PEOPLE
FAR THE PEOPLE

ನಾಟಕಕ್ಕೆ ಬರಲು ಕಾರಣ?
ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಗಲು ಅವಕಾಶವನ್ನೇ ಕೊಡಲ್ಲ!
ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ.
ದೀರ್ಘ ಸೇವೆಯ ರಹಸ್ಯ
ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ.
ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೆಲಸ ಮಾಡ್ತಾ ಇರೋದು
ಪೆದ್ದ ಗುಂಡನ ತರ್ಕ
ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ. ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್ ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದು ಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ.
ಮಾರಾಟ
ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ?
ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ.
ಅಭ್ಯಾಸ ಬಲ
ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಪೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ ಕೆಳಗೆ ಇಳಿದು ಸ್ವಲ್ಪ ದೂರ ತಳ್ಳಿ.. ಎಂಜಿನ್ ಆಫ್ ಆಗಿದೆ
1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
2. ಹುಡುಗಃ ನಾವಿಬ್ರೂ ಓಡಿಹೋಗೋಣ್ವ..?
ಹುಡುಗಿಃ ನಂಗೆ ಒಬ್ಬಳೇ ಬರೋಕೆ ಭಯ ಆಗುತ್ತೆ.
ಹುಡುಗಃ ಹಾಗಾದ್ರೆ ಜೊತೆಗೆ ನಿನ್ನ ತಂಗೀನೂ ಕರ್ಕೋಂಡು ಬಾ.
3. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಗುವವನಿಗೆ ' ಮದುವೆ ಗಂಡು " ಎನ್ನಬಹುದು.
4. ಹೆಣ್ಣು ಗಂಡಿಗಿರುವ ವ್ಯತ್ಯಾಸ;
ಹೆಣ್ಣು ಗಂಡ ಸಿಗೋವರೆಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ.
ಗಂಡು ಹೆಂಡ್ತಿ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ.
5. ಮುದಿಸೊಳ್ಳೆಃ ಮಗೂ... ನಮ್ಮ ಕಾಲದಲ್ಲಿ ರಕ್ತ ಕುಡಿಬೇಕಾದ್ರೆ ಎಷ್ಟು ಕಷ್ಟ ಆಗ್ತಿತ್ತು ಗೊತ್ತಾ.
ಮೊಮ್ಮಗ ಸೊಳ್ಳೆಃ ಯಾಕೆ.. ತಾತ..?
ಮುದಿಸೊಳ್ಳೆಃ ಆವಾಗ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ಕೋತಾ ಇದ್ರು.
6. ಗುಂಡ ಹೋಟೆಲ್ ಮ್ಯಾನೇಜರ್ ಗೆ; ನನ್ನ ಹೆಂಡ್ತಿ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಬೇಗ ಬಾ..
ಹೋಟೇಲ್ ಮ್ಯಾನೇಜರ್ ; ಸಾರ್ ಅದಕ್ಕೆ ನಾನೇನ್ ಮಾಡ್ಲಿ..?
ಗುಂಡ. ; ಅಯ್ಯೋ ಕಿಟಕಿ Open ಆಗ್ತಿಲ್ಲ, ಸ್ವಲ್ಪ ಹೆಲ್ಪ್ ಮಾಡು ಬಾರಯ್ಯ.
7. ಅಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ತನ್ನ ಮನ ಶಾಂತಿಗಾಗಿ
ಇಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ಪಕ್ಕದ ಮನೆ ಶಾಂತಿಗಾಗಿ.
8. ಬಾಸ್ ; ಯಾಕೋ ನಾಣಿ ಆಫೀಸಿಗೆ ಲೇಟು.
ನಾಣಿ ; ಹೆಂಡ್ತಿಗೆ ಅಡುಗೆ ಮಾಡಿಟ್ಟು ಬರೋದಕ್ಕೆ ಸ್ವಲ್ಪ ಲೇಟಾಯಿತು ಸಾರ್.
ಬಾಸ್ ; ಈಡಿಯೇಟ್ ಸುಳ್ಳು ಹೇಳಬೇಡ, ನಾನು ಅಡುಗೆ ಮಾಡಿ, ಜೊತೆಗೆ ಪಾತ್ರೆ ತೊಳೆದು ಕರೆಕ್ಟ್ ಟೈಮಿಗೆ ಆಫೀಸಿಗೆ ಬರೋಲ್ವ..!!
9. ನನ್ನಲ್ಲೊಂದು ಕ್ಯಾಮೆರಾ ಇದ್ದಿದ್ರೆ ನಿನ್ನ ಪ್ರತಿಯೊಂದು ಚಲನವಲನಗಳನ್ನು ಕ್ಲಿಕ್ಕಿಸುತ್ತಿದ್ದೆ.
ಆ ಮೋಹಕ ನಗೆ.. ಮುದ್ದು ಮೊಗ ಎಲ್ಲವನ್ನೂ ಕ್ಲಿಕ್ಕಿಸಿ ನನ್ನ ಕಿಚನ್ ನಲ್ಲಿ ಅಂಟಿಸಿ.......
!
ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳನ್ನು ಭಯಪಡಿಸುತ್ತಿದ್ದೆ.
10. ಬಿಕ್ಷುಕಃ ಅಮ್ಮಾ.. ಒಂದು ರೂಪಾಯಿ ಬಿಕ್ಷೆ ಹಾಕಮ್ಮ.
ಆಕೆಃ ಲೋ ಹೀಗೆ ರೋಡ್ ನಲ್ಲಿ ನಿಂತು ಬಿಕ್ಷ ಕೇಳೋಕೆ ನಾಚ್ಗೆ ಆಗೋಲ್ವ..?
ಬಿಕ್ಷುಕ್ಷಃ ಹೋಗಮ್ಮ.. ನೀನು ಕೊಡೋ ಒಂದು ರೂಪಾಯಿಗೆ ನಾನು ಆಫೀಸ್ ನಲ್ಲಿ ಕೂತ್ಕೋಬೇಕಾ..?
ಕಿಲಾಡಿ ಮಗು....
ಒಂದು ಮಗು ತಾಯಿಯೊಂದಿಗೆ ಅಂಗಡಿಗೆ ಹೋಯ್ತು. ಅಂಗಡಿಯವನಿಗೆ ಈ ಮುದ್ದು ಮಗುವನ್ನು ನೋಡಿ ಖುಷಿ ಆಯ್ತು.
ಒಂದು ಜಾರಲ್ಲಿದ್ದ ಸಿಹಿ ತಿಂಡಿಯನ್ನು ತೋರಿಸಿ "ಮಗು ನಿಂಗೆ ಎಷ್ಟು ಬೇಕೋ ಅಷ್ಟು ತಗೋ" ಅಂದ. ಆದರೆ ಮಗು ತೆಗೆದುಕೊಳ್ಳಲಿಲ್ಲ. ಅಂಗಡಿಯವನಿಗೆ ಆಶ್ಚರ್ಯ ಆಯ್ತು. ಇಷ್ಟು ಚಿಕ್ಕ ಮಗು ಆದ್ರೂ ಸಿಹಿಯನ್ನು ತಗೊತ್ತಾ ಇಲ್ಲ!! ಮತ್ತೆ ಹೇಳಿದ ಮಗು ತಗೋ ಅಂತಾ...
ತಾಯಿಗೂ ಇದು ಕೇಳಿಸಿತು. ಅವಳೂ ಸಹ ಹೇಳಿದಳು. "ತಗೋ ಪುಟ್ಟಾ"ಅಂತಾ!!! ಉಹೂಂ ಮಗು ತೆಗೆದುಕೊಳ್ಳುತ್ತಾನೇ ಇಲ್ಲ.
ಅಂಗಡಿಯವವನೇ ಮಗು ತೆಗೆದು ಕೊಳ್ಳುತ್ತಾ ಇಲ್ಲ ಎಂದು ಅವನೇ ಕೈಯಲ್ಲಿ ಒಂದಿಷ್ಟು ಸಿಹಿ ಕೈಯಲ್ಲಿ ಹಿಡಿದು ಮಗುವಿಗೆ ಕೊಟ್ಟ!! ಆಗ ಮಗು ಖುಷಿಯಿಂದ ತೆಗೆದುಕೊಂಡಿತು!!
ಮನೆಗೆ ಹೋಗುವಾಗ ತಾಯಿ ಕೇಳಿದಳು... "ಅವರೇ ಹೇಳಿದಾಗ ಯಾಕೆ ತಗೊಳ್ಳಲಿಲ್ಲ?"
ಆಗ ಮಗು ಹೇಳಿತು ಅಮ್ಮಾ ನನ್ನ ಕೈ ನೋಡು ಎಷ್ಟು ಚಿಕ್ಕದು ಅಂತಾ. ನಾನು ತೆಗೆದುಕೊಂಡಿದ್ದರೆ ಜಾಸ್ತಿ ಬರುತ್ತಿರಲಿಲ್ಲ. ಅಂಕಲ್ ಅವರು ತಮ್ಮ ದೊಡ್ಡ ಕೈಯಲ್ಲಿ ಹೆಚ್ಚು ಕೊಟ್ಟರು!!
ನೀತಿಃ ನಾವು ತೆಗೆದುಕೊಂಡಾಗ ಕಡಿಮೆ ಸಿಗಬಹುದು. ಆದರೆ ದೇವರು ನಮ್ಮ ಬಯಕೆಗಿಂತಲೂ ಹೆಚ್ಚು ಕೊಡುತ್ತಾನೆ. ನಮ್ಮ ಕೈಯಲ್ಲಿ ಹಿಡಿದಿಡಲಾರದಷ್ಟು!
ಮೊದಲ ಪರಿಣಾಮ ಗಂಡನಿಗೆ
ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ
ಹೆಂಡತಿ ಉಣ್ಣುತ್ತಾಳೆ ಯಾಕೆ?
ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,
ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ.
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ
ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು
ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ
ಸಜ್ಜನನೊಬ್ಬನು ಅವನನ್ನು ತಡೆದು,
ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.
ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು
ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.
ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ
ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ
ತೂರಾಡಿಕೊಂಡೇ ಮುನ್ನಡೆದ.
ಪ್ರೀತಿ ಕಡಿಮೆ ಆಗ್ತಾ ಇದೆ
ರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ
ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ.
ಉಮಾ-- ಹೇಗೆ ಹೇಳುತ್ತಿ?
ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು,
ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ."
ಪಂಚರ್ ಆಗಿದೆ .
ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ .
ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ .
ಒಹ್ ಅತ್ತೆ ಮಾವ
ಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ.
ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ.....
30 ವರ್ಷ ಅನುಭವ 
ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?
ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.
ಮರ್ಯಾದೆ
ಮಗು ; ಅಪ್ಪ ಇಲ್ಲಿ ಬಾ.
ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯ ಬಾರದು ಮರ್ಯಾದೆ ಇಂದ ಕರಿಬೇಕು
ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ
ದೇವದಾಸ್ ಆಗ್ತಾರೆ ಯಾಕೆ 
ಹುಡುಗರು ದೇವದಾಸ್ ಆಗ್ತಾರೆ ಯಾಕೆ ?
ಹುಡುಗಿಗಾಗಿ.
ಅವಳ ಅಂದಕ್ಕಾಗಿ.
ಮನಸಿಗಾಗಿ.
ಪ್ರೀತಿಗಾಗಿ.
ಇವು ಯಾವುದಕ್ಕೂ ಅಲ್ಲ ಹುಡುಗಿ ಗೋಸ್ಕರ ಮಾಡಿದ ಸಾಲಕ್ಕಾಗಿ.
ಡ್ರೈವಿಂಗ್ ಸಂಬಳ 
ಬಾಸ್: ನನಗೆ ಒಬ್ಬ ಡ್ರೈವರ್ ಬೇಕು starting
ಸಂಬಳ ೩೦೦೦ ಕೊಡ್ತೀನಿ
ಗುಂಡ: ಏನ್ ಗ್ರೇಟ್ ಸರ್ ನೀವು starting ೩೦೦೦ ಕೊಟ್ರೆ ಡ್ರೈವಿಂಗ್ ಸಂಬಳ ಎಷ್ಟು?
ಗ್ರೌಂಡ್ ಫ್ಲೋರ್ ನಲ್ಲೆ ಇರೋದು
ಸರ್ದಾರ್ ಬಸ್ ಸ್ಟಾಪ್ ನಲ್ಲಿ ಕಾಯ್ತಾ ಇದ್ದ
ಒಬ್ಬ ಬೈಕ್ ನಲ್ಲಿ ಬಂದ.
ಮ್ಯಾನ್ : ಲಿಫ್ಟ್ ಬೇಕ?
ಸರ್ದಾರ್ : ಬೇಡ ನಮ್ಮ ಮನೆ ಗ್ರೌಂಡ್ ಫ್ಲೋರ್ ನಲ್ಲೆ ಇರೋದು.
75 kg ಸರ್ 
ಸರ್ದಾರ್ ; ನಾನು ಒಳಗೆ ಬರಬಹುದ ಸರ್
ಇಂಟರ್ ವ್ಯೂ ಆಫೀಸರ್ ; ವೈಟ್ ಪ್ಲೀಸ್
ಸರ್ದಾರ್ ; 75 kg ಸರ್
ಮನೆಗೆ ಬರಬೇಕೆಂದು 
ಗುಂಡನ ಊರಿಗೆ ಸ್ವಾಮೀಜಿಯೊಬ್ರು ಬಂದಿದ್ದರು. ಅವರು ಜನರಿಗೆ ಭೋಧಿಸತ್ತಾ "ಯಾರು ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತೀರಿ?" ಎಂದು ಕೇಳಿದರು . ಗುಂಡನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಕೈ ಎತ್ತಿದರು.
ಆಗ ಸ್ವಾಮೀಜಿ ಕೇಳಿದರು "ಯಾಕೆ ಗುಂಡ , ನಿಮಗೆ ಸ್ವರ್ಗಕ್ಕೆ ಹೋಗಲು ಇಷ್ಟವಿಲ್ಲವೆ? "
ಗುಂಡ :ಹೇಳಿದ .ಹಾಗಲ್ಲ ಸ್ವಾಮೀಜಿ, ಕೀರ್ತನೆ ಮುಗಿದ ಕೂಡಲೇ ಮನೆಗೆ ಬರಬೇಕೆಂದು ನನ್ನ ಹೆಂಡತಿ ಹೇಳಿದ್ದಾಳೆ."

ಹಾಸ್ಯ (ಸುಮ್ಮನೆ ನಕ್ಕುಬಿಡಿ)3

ನಗ್ರೀ! ನಕ್ಕು ಬಿಡಿ!!
ಮುದುಕಿ: ರೀ, ನಮ್ಮನೆ ಎದುರಿಗೆ ಇರೋ
ಗುಜರಿ ಅಂಗಡಿಯ ಹುಡುಗ ನನ್ನ
ನೋಡಿ ದಿನಾ ನಗ್ತಾನೆ..
ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು
ಹಳೆ ಸಾಮಾನ್ ಮೇಲೇನೆ ಕಣ್ಣು...!!!!!
ನಿನಗೆ ಅಕ್ಕ ಇಲ್ವಾ
ಪುಟ್ಟ ಹುಡುಗ ಅಕ್ಕನ ರೂಮಿನ ಬಾಗಿಲು ತೆರದ.
ಅಲ್ಲಿ ಅಕ್ಕನ ಬಾಯ್ ಫ್ರೆಂಡ್ ನಿಂತಿದ್ದ .
ಅದನ್ನ ನೋಡಿ ಮುಗ್ಧ ಹುಡುಗ ಯೇಳಿದ
ದಿನಾಲೂ ನನ್ನ ಅಕ್ಕನ ನೋಡೋಕೆ ಬರ್ತಿಯಲ್ಲ
ಯಾಕೆ ನಿನಗೆ ಅಕ್ಕ ಇಲ್ವಾ?
ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ
"ಕಿಟ್ಟು-- ನಮ್ಮಪ್ಪ ಬ್ಯಾಂಕಲ್ಲಿ ಒಂದು ದಿನವೂ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ.
ಪುಟ್ಟು-- ಅದು ಹೇಗೆ ಸಾಧ್ಯವೋ?
ಕಿಟ್ಟು-- ನಮ್ಮಪ್ಪ ನೈಟ್ ವಾಚ್ ಮ್ಯಾನ್ ಎಂದ."
ಹಾಟ್ ಕಿಸ್
ಲೆಕ್ಚರರ್ ಅಂದರೆ.....!
ಟೀಚರ: ಲೆಕ್ಚರರ್ ಅಂದರೆ ಯಾರು ?
ವಿದ್ಯಾರ್ಥಿ: ಇನ್ನೊಬ್ಬರು ನಿದ್ರೆ ಮಾಡ್ತಿದ್ದಾಗ ಒಂದೇ ಸಮನೆ ಮಾತಾಡಿ ಡಿಸ್ಟರ್ಬ್ ಮಾಡೋ ಕೆಟ್ಟ ಚಾಳಿಯವನು.

ಕಚಗುಳಿ ಇಡುವ ಹಾಸ್ಯಗಳು
ಮೊದಲ ಪರಿಣಾಮ ಗಂಡನಿಗೆ
ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ
ಹೆಂಡತಿ ಉಣ್ಣುತ್ತಾಳೆ ಯಾಕೆ?
ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ,
ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ.
ಗೊತ್ತಿದ್ದು ಗೊತ್ತಿದ್ದು!!
ಜನ : ಗೊತ್ತಿದ್ದು ಗೊತ್ತಿದ್ದು!! ಆ ಬಲಿಷ್ಟ ಎದುರಾಳಿಗಳಿಗೆ ಸವಾಲ್ ಹಾಕಿ ಚುನಾವಣೆಗೆ ನಿಂತಿದ್ದೀರಾ, ಕೇಳಿದ್ರೆ ರೆಕಾರ್ಡ್ ಬ್ರೇಕ್ ಮಾಡ್ತೀನಿ ಅಂತೀರಾ ಇದರ ಮರ್ಮ??
ಲೋಕಿ : ಮತ್ತಿನ್ನೀನ್ರಿ, ಒಂದು ರೆಕಾರ್ಡ್ ಅತಿ ಹೆಚ್ಚು ಬಾರಿ ಡಿಪಾಸಿಟ್ ಕಳ್ಕಂಡಿರುತ್ತೀನಿ.
ಎರಡನೇಯದಾಗಿ ಬಹಳ ಹೆಚ್ಚು ಅಂತರದಿಂದ ಇಡೀ ರಾಜ್ಯದಲ್ಲೆ ಎದುರಾಳಿಗೆ ಲೀಡ್ ಕೊಟ್ಟ, ಅಂತ ಪೇಪರಿನಲ್ಲಿ ಫೋಟೋ
ಹಾಗೂ ಹೆಸರು ಬರುತ್ತಲ್ಲ, ಇದೂ ರೆಕಾರ್ಡ್ ತಾನೆ!!!
30 ವರ್ಷ ಅನುಭವ 
ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?
ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.
ಟ್ಯೂಬ್ ಲೈಟ್
ಸಂತ: ನನಗೆ ಬ್ಲ್ಯಾಕ್ ಟ್ಯೂಬ್ ಲೈಟ್ ಕೊಡಿ.
ಅಂಗಡಿಯವ: ಬ್ಲ್ಯಾಕ್ ಟ್ಯೂಬ ಲೈಟ್ ಯಾಕೆ?
ಸಂತ: ಹಗಲನ್ನ ಕತ್ತಲೆ ಮಾಡಿ ಮಲಗೋಕೆ.
ರಾವಣ ಸೀತಾ
ರಾವಣ : ಬೀಕ್ಷೆ ಪ್ಲೀಸ್
ಸೀತಾ : ತಗೊಳ್ಳಿ
ರಾವಣ : ಲೈನ್ ದಾಟಿ ಬಾರಮ್ಮ (ಸೀತೆ ಹೊರಗೆ ಬರುತಾಳೆ)
ರಾವಣ :ಹ ಹಾ ಹಾಅ ನಾನು ನಾನು ಸ್ವಾಮಿ ಅಲ್ಲ ರಾ ...ವ ..ಣ
ಸೀತೆ ಹ ಹಾ ಹಾಅ ನಾನು ಸೀತಮ್ಮ ಅಲ್ಲ ಮನೆ ಕೆಲಸದ ನಿ0...ಗ...ಮ್ಮ
ಇಷ್ಟೊಂದು ಕಡಿಮೆ ಮಾರ್ಕ್ಸ್ ?
ಅಪ್ಪ ; ಇಷ್ಟೊಂದು ಕಡಿಮೆ ಮಾರ್ಕ್ಸ್ ?
ಕಪಾಳಕ್ಕೆ ಹೊಡಿಬೇಕು ಅನ್ನಿಸುತಿದೆ ನನಗೆ ..
ಮಗ ; ನಂಗು ಹಗೆ ಅನ್ನಿಸ್ತಿದೆ ಅಪ್ಪ ನಡಿ ಹೋಗೋಣ
ನನಗೆ ಅ ಮೇಷ್ಟ್ರು ಮನೆ ಗೊತ್ತು .....!
ನಿಜವಾದ ಇರುವೆಗಳೇ
ಅಂದು ಗುಂಡ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಗುಂಡ : ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
ಇವಗಿನ್ನೂ (2009)!
ಮೊದಲನೇ ಹೆಂಡತಿ
ಹೆಂಡತಿ ; ನಿಮಗೆ ರಾಣಿ ಅಂತ ಮೊದಲನೇ ಹೆಂಡತಿ ಇರೋ ವಿಷ್ಯ ನಂಗೆ ಮೊದಲೇ ಯಾಕೆ ಹೇಳಿಲ್ಲ?
ಗಂಡ ; ಮೊದಲೇ ಹೇಳಿದ್ದೆ ಅಲ್ವಾ ಚಿನ್ನ ನಿನ್ನ ರಾಣಿ ತರ ನೋಡ್ಕೋತಿನಿ ಅಂತ .....
ನಕ್ಕಾಗ ನನ್ನವಳು
ನಕ್ಕಾಗ ನನ್ನವಳು
ದು೦ಡು ಮಲ್ಲಿಗೆಯಂತೆ!!
ಅತ್ತರೋ ಇವಳು
ಮುದ್ದಾದ ಮಗುವಂತೆ
ಮುನಿದಾಗ ಮಾತ್ರ
RDX Bomb ನಂತೆ !
ನಡುರಾತ್ರಿ ಕುಡುಕನೊಬ್ಬ 
ಖಾಲಿ ಗೋರಿಯೊಳಗೆ ಬಿದ್ದು 'ಚಳಿ ತಾಳೋಕಾಗ್ತಾ ಇಲ್ಲ...
ಯಾರದರೂ ಬನ್ನಿ' ಎಂದು ಕೂಗುತ್ತಾ ಇದ್ದ.
ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ...'ಚಳಿಯಾಗದೆ ಇನ್ನೇನಾದೀತು? ಮೂರ್ಖರು!
ಕೆಲವು ಹಾಸ್ಯಗಳು
ನಾಟಕಕ್ಕೆ ಬರಲು ಕಾರಣ?
ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ.
ನಗಲು ಅವಕಾಶವನ್ನೇ ಕೊಡಲ್ಲ!
ಒಂದಿಷ್ಟು ಹಾಸ್ಯಗಳು ಮತ್ತು ಬುದ್ದಿ ಮಾತುಗಳು...
ಜಗತ್ತು ಏನ್ ಹೇಳುತ್ತೆ ಅಂತ ಚಿಂತೆ ಮಾಡ್ಬೇಡಿ .... 
ಜಗತ್ತು ಏನ್ ಹೇಳುತ್ತೆ ಅಂತ ಚಿಂತೆ ಮಾಡ್ಬೇಡಿ ....
ಜನ ಏನ್ ಅಂದ್ಕೋತಾರೋ ಅಂತ ತಲೆ ಕೆಡಿಸ್ಕೋಬೇಡಿ ....
ನಿಮ್ಮ ಮನಸ್ಸಿಗೆ ಸರಿ ಅಂತ ಅನ್ನಿಸಿದ್ರೆ ಮಾತ್ರ,
ದಿನಾಲೂ ಸ್ನಾನ ಮಾಡಿ
ಹಾಸ್ಪಿಟಲ್ ನಿಂದ ಕಾಲ್ ಬಂದಿದೆ
ಹೆಂಡತಿ ; ಅಪ್ಪನಿಗೆ ಕಾರ್ ಆಕ್ಸಿಡೆಂಟ್ ಆಗಿದೆಯಂತೆ
ಹಾಸ್ಪಿಟಲ್ ನಿಂದ ಕಾಲ್ ಬಂದಿದೆ.
ಗಂಡ ; ಬರೆ ಕಾಲ್ ಮಾತ್ರ ಕಲ್ಸಿದರ? ಉಳಿದ ಬಾಡಿ ಎಲ್ಲ ಏನಾಯ್ತು?
ಮೈಸೂರ್ ಪಾಕ್ ನಿಂದ.
ಡಾಕ್ಟರ್ ; ಒಂದೇ ಸಲ ೩ ಹಲ್ಲು ಹೇಗೆ ಹೋಯ್ತು?
ಗುಂಡ ; ನಾನಾ ಹೆಂಡ್ತಿ ಮಾಡಿದ ಮೈಸೂರ್ ಪಾಕ್ ನಿಂದ.
ಡಾಕ್ಟರ್; ತಿನ್ನೋದಿಲ್ಲ ಅನ್ಬೇಕಿತ್ತು.
ಗುಂಡ;ತಿನ್ದಿದಕ್ಕೆ ೩ ಹೋಯ್ತು ಬೇಡ ಅಂದಿದ್ರೆ ೩೨ ಹೋಗ್ತಿತು
ಶೇವ್ ಮಾಡೋದು
ಹುಡುಗಿ ; ನೀನು ವಾರದಲ್ಲಿ ಎಷ್ಟು ಸರಿ ಶೇವ್ ಮಾಡ್ತೀಯ?
ಹುಡುಗ ; ವಾರಕ್ಕೆ ಅಲ್ಲ ದಿನಕೆ ೩೦ ರಿಂದ ೪೦ ಸರಿ ಮಾಡ್ತೀನಿ.
ಹುಡುಗಿ ; ಏನು ನೀನೇನು ಹುಚ್ಚನ ?
ಹುಡುಗ ; ನನ್ ಕೆಲ್ಸನೆ ಶೇವ್ ಮಾಡೋದು .
ಜಸ್ಟ್ ರಿಲ್ಯಾಕ್ಸ್........
ಸರ್ವಧಾರಿ ವರ್ಷ ಇನ್ನೇನು ಮುಗಿಯುತ್ತ ಬಂದಿದೆ. ತಿಂಗಳ ಕೊನೆ. ಆರ್ಥಿಕ ಹೊಡೆತದಿಂದಾಗಿ ಬ್ಯಾಂಕಲ್ಲಿ ಹಣ ಉಳಿದಿರುವುದೂ ಅಷ್ಟಕ್ಕಷ್ಟೇ. ಆದರೆ, ಯುಗಾದಿಯ ನೆಪ ಕೇಳಬೇಕಲ್ಲ. ಅಳಿದುಳಿದ ದುಡ್ಡನ್ನು ಕೆದರಿಕೊಂಡು ಹಬ್ಬ ಮಾಡಬೇಕೆಂದು ಬ್ಯಾಂಕಲ್ಲಿ ಜನ ಜಮಾಯಿಸಿದ್ದಾರೆ.
ಕ್ಯಾಲೆಂಡರ್
ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ.
ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ
ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ
ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ
ಮನುಷ್ಯ ಮತ್ತು ಮೊಬೈಲು
ಮನುಷ್ಯನಿಗೂ ಮತ್ತು ಮೊಬೈಲಿಗೂ ಏನು ವ್ಯತ್ಯಾಸ?
ಮನುಷ್ಯ ಕಾಲು ಇಲ್ಲದೇ ಬ್ಯಾಲೆನ್ಸ ಮಾಡಕ್ಕಾಗಲ್ಲ
ಮೊಬೈಲ ಬ್ಯಾಲೆನ್ಸ ಇಲ್ಲದೇ ಕಾಲ್ ಮಾಡೋಕಾಗಲ್ಲ!
ಮೊಟ್ಟೆ ಇಡು ನೋಡೋಣ
ಹುಂಜಃ ಐ ಲವ್ ಯು
ಹೇಂಟೆಃ ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ?
ಹುಂಜಃ ನಿನಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ.
ಹೇಂಟೆಃ ಹಾಗಿದ್ರೆ ನನ್ನ ತರಾ ಮೊಟ್ಟೆ ಇಡು ನೋಡೋಣ.
ಬ್ರೆಕ್ ಡ್ಯಾನ್ಸ್
ಸರ್ದಾರ್ ಸೈಕಲ್ ಬ್ರೆಕ್ ನ ಕೈಯಲ್ಲಿ ಹಿಡ್ಕೊಂಡ್ ಡ್ಯಾನ್ಸ್ ಮಾಡ್ತಾ ಇರ್ತಾನೆ.
ಗೆಳೆಯಃ ಲೋ ಏನೋ ಮಾಡ್ತಾ ಇದೀಯಾ ನೀನು?
ಸರ್ದಾರ್: ಓಯೆ ಅಷ್ಟೂ ಗೊತ್ತಾಗಲ್ವ ನಿಂಗೆ. ಬ್ರೇಕ್ ಡ್ಯಾನ್ಸ್
ಸಿಐಡಿ
ಸಿಐಡಿ: ಈ ಕ್ರಿಮಿನಲ್ಸ ಯಾಕೆ ತಮ್ಮ ಕೆಲಸ ಆದ ತಕ್ಷಣ ಬೆರಳಚ್ಚು ಬಿಟ್ಟು ಹೋಗುತ್ತಾರೆ?
ಸರ್ದಾರಃ ನನಗನ್ನಿಸುತ್ತೆ ಅವರು ಅನಕ್ಷರಸ್ಥರಿರಬೇಕು. ಅವರಿಗೆ ಓದು ಬರಹ ಗೊತ್ತಿದ್ದರೆ ಸಹಿ ಮಾಡಿ ಹೋಗ್ತಾ ಇದ್ದರು.
ಮೊಟ್ಟೆಯಿಂದ ಹೊರಗೆ..
ಟೀಚರ್ : ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಬರುತ್ತೆ?
ಗುಂಡಃ ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಹೇಗೆ ಬಂತು ಅಂತಾ ಮುಖ್ಯ ಅಲ್ಲ. ಅದು ಮೊಟ್ಟೆಯ ಒಳಗೆ ಹೇಗೆ ಹೋಯ್ತು ಅನ್ನೋದೇ ಮುಖ್ಯ.
ಯಮರಾಜನ ಚಿಂತೆ
ಯಮರಾಜ
ಒಮ್ಮೆ ಯಮರಾಜ ಮುಖ ಊದಿಸಿಕೊಂಡು ಕೂತಿದ್ದ. ಚಿತ್ರಗುಪ್ತ ಅವನ ಬಳಿ ಬಂದು "ಯಮರಾಜರೇ ಯಾಕೆ ಉದಾಸೀನರಾಗಿರುವಿರಿ?" ಅಂತಾ ಕೇಳಿದ.
"ಹೇ ಚಿತ್ರಗುಪ್ತ ಭೂಲೋಕದಲ್ಲಿ ಇತ್ತೀಚೆಗೆ ಪಾಪ ಮಾಡುವವರ ಸಂಖ್ಯೆ ತೀರಾ ಹೆಚ್ಚುತ್ತಿದೆ. ಆದ್ದರಿಂದ ನರಕದಲ್ಲಿ ಸ್ವಲ್ಪವೂ ಜಾಗವಿಲ್ಲದಂತಾಗಿದೆ. ಏನು ಮಾಡಲಿ ಎಂದು ಹೊಳೆಯುತ್ತಿಲ್ಲ" ಎಂದ ಯಮರಾಜ.
ಸುಮ್ಮನೆ ನಕ್ಕು ಬಿಡಿ
ಮನೆ ಮಾಲಿಕಃ ರಾಮು ಹೊರಗಡೆ ಹೂ ಗಿಡಗಳಿಗೆಲ್ಲಾ ನೀರು ಹಾಕಪ್ಪಾ...
ರಾಮುಃ ಹೊರಗಡೆ ಮಳೆ ಬರ್ತಾ ಇದೆ, ದಣಿ.
ಮನೆ ಮಾಲಿಕಃ ನೋಡು, ಆ ಕಡೆ ರೂಮಲ್ಲಿ ಕೊಡೆ ಇದೆ, ತಗೋ.
ಕೇಳಿದ್ದು
ಸಾಸಕರ್ನಾ ಹುಡಕಂಡು ಬೆಳಗಾವಿ ಜನ ಗೋವಾ ಬೀಚ್ ಗೆ ಹೋಗಾವ್ರಂತೆ!!
ಏನ್ಲಾ, ಮಹಾರಾಸ್ಟ್ರಾದ ಗಡಿಯಾಗೆ ಬಸ್ನೆಲ್ಲ ಸುಟ್ಟಾವ್ರಂತೆ. ಆದ್ರೆ ಬೆಳಗಾವ್ಯಾಗೆ ಪಸಂದ ಪಸಂದ ಅಡಿಗೆ ಮಾಡಿ ಹಾಕ್ತ ಇದ್ದಾರಂತಲ್ಲ ಅವ್ರದ್ದು ಹೊಟ್ಟೆನೋ ಹೊಳೆಕೊಡ್ಳೊ ಅಂತ ಗೋತ್ತಗಾಕಿಲ್ಲಪ್ಪ..
ಬೆಳಗಾವಿನ ಉದ್ದಾರ ಮಾಡ್ತಿವಿ ಅಂತ ಬೆಂಗಳುರಿಂದ ಅಲ್ಲಿಗೆ ಎಲ್ಲ್ರನ್ನ ಕಟ್ಟಕಂಡು ಹೋಗೈತೆ ಸರ್ಕಾರ.ಬೆಳಗಾವಿನ ಉದ್ದಾರ ಮಾಡೋದು ಬಿಟ್ಟು ತಮ್ಮ ಉದ್ದಾರಾನ ಮಾಡಕಾತಾ ಇದ್ದಾರಲ್ಲ ಸಿವಾ!!
ಅಮ್ಮಾ ಬೇಕು ಅಂತಾ
ಅಪ್ಪಾಃ ಮಕ್ಕಳೇ ನಾನು ಹೊರಗಡ ಹೋಗ್ತಾ ಇದ್ದೇನೆ. ನಿಮಗೆ ಏನು ಬೇಕು?
ಮಕ್ಕಳುಃ ಚಾಕಲೇಟ್, ಐಸ್ ಕ್ರೀಮ್ ಬೇಕು ಅಪ್ಪಾ
ಅಪ್ಪಾಃ ಬಡ್ಡಿ ಮಕ್ಕಳು ಹೊಸ ಅಮ್ಮ ಬೇಕು ಅಂತಾ ಒಂದು ಸರೀನೂ ಕೇಳಲಿಲ್ಲ!
ಕುಮಾರಣ್ಣಾ ,ಅನೀತಕ್ಕನ್ನ ಬೇರೆ ಬೇರೆ ಮಾಡವ್ರಂತೆ!!
ಕುಮಾರಸ್ವಾಮಿ - ಅನಿತಾ ಕುಮಾರ ಸ್ವಾಮಿ
ಪಾಪ ಇವಾಗಷ್ಟೇ ಶಾನೆ ಕಷ್ಟಪಟ್ಟು ಎಂ.ಎಲ್.ಎ ಆದ ಗೌಡರ ಸೊಸೆ ಅಲಿಯಾಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನೀತಾ ಗೆ ಇದೆಂತ ಕಷ್ಟದ್ ದಿನಗಳಯ್ಯ ಅಂದನಂತೆ ಸ್ಪೀಕರ್ ರೀಪೇರಿ ಮಾಡ್ತಿದ್ದ ಜಗ್ಯ.
ಮೊನ್ನೆ ಅಷ್ಟೆ ಪೇಪರ್ ನಾಗೆ ಆರೀತಿ "ಮಧುಗಿರಿಗೆ ಅನೀತಕ್ಕ ಮಧುಚಂದ್ರಕ್ಕೆ ಕುಮಾರಣ್ಣ" ಅಂತೆಲ್ಲ ಬರೆದು ಮನಸ್ಸಿನ ನೆಮ್ಮದಿನೆ ಕೆಡ್ಸಾವ್ರಂತೆ,ಹಿಂಗೆ ಹಂಗೆ ಅಂತೆಲ್ಲ ರೆಕ್ಕೆ ಪುಕ್ಕ ಹಾರ್ತಾ ಇದ್ರೆ ಪಾಪ ಅನೀತಕ್ಕಾನಾದ್ರು ಅದೇಂಗೆ ರಾಧಕ್ಕನ ಮನೆ ಕಡೆ ತಲೆ ಹಾಕಂಡ ಮಲಕ್ಕತ್ತಾಳ ಎಂದ ಅನಂತಣ್ಣ.
ಸ್ವಲ್ಪ ನಕ್ಕು ಬಿಡೋಣ..!!
1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
ಘಜನಿ ಕನ್ನಡದಲ್ಲಿ ಬಂದಿದ್ದರೆ
ಅಮೀರ ಖಾನ್ ಅವರ ಘಜನಿ ಬಿಡುಗಡೆ ಆಗಿ ಬಾಕ್ಸ್ ಆಫೀಸಲ್ಲಿ ಕೋಟಿಗಟ್ಟಲೆ ದೋಚುತ್ತಿದೆ. ಅದು ಕನ್ನಡದಲ್ಲಿ ಬಂದಿದ್ದರೆ ಹೀಗಿರುತಿತ್ತೇ? ಸುಮ್ನೆ ತಮಾಷೆಗಾಗಿ  ಹಾಗೆ ಹಿಂದಿ ಘಜನಿ ಫಿಲಂ ತುಂಬಾ ಚೆನ್ನಾಗಿದೆ. ನೀವು ನೋಡಿದ್ದೀರಾ? ತಮಿಳು ಘಜನಿ ನೋಡಿದ್ದರೆ ಇದು ಅದರ ಕಾಪಿ. ಕೊನೆಯ 30 ನಿಮಿಷದ ಕಥೆ ಬದಲಾಗಿದೆ.
ಹುಡುಗಿನೋ, ಹುಡುಗಾನೋ
ಜವಾನ : ಸಾರ್, ನಿಮ್ಮನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ
ಆಫೀಸರ್ : ಹುಡುಗಿನೋ, ಹುಡುಗಾನೋ ?
ಜವಾನ : ಗೊತ್ತಿಲ್ಲ ಸಾರ್ ಕೇಳಿಕೊಂಡು ಬರುತ್ತೇನೆ .
ಅವಳು ಕೆಟ್ಟ ಹುಡುಗಿ, ನಾನು ಅಷ್ಟು ಚೆನ್ನಾಗಿ ಹೇಳಿದೀನಿ
ಆಕೆ - ನಾನು ಅವಳಿಗೆ ಹೇಳಬೇಡ ಅಂತ ಹೇಳಿದ್ದನ್ನು ನೀನು ಅವಳಿಗೆ ಹೇಳಿದೆ ಅಂತ ಅವಳು ಹೇಳಿದಳು.
ಈಕೆ - ಅವಳು ಕೆಟ್ಟ ಹುಡುಗಿ, ನಾನು ಅಷ್ಟು ಚೆನ್ನಾಗಿ ಹೇಳಿದೀನಿ ನಿನಗೆ ಹೇಳಬೇಡ ಕಣೇ ಅಂತ
ಆಕೆ - ಹೋಗಲಿಬಿಡು ! ನಾನು ಕೇಳ್ದೆ ಅಂತ ನೀನು ಮತ್ತೆ ಅವಳಿಗೆ ಹೇಳಬೇಡ ಗೊತ್ತಾಯಿತಾ ಅಷ್ಟೆ ....
ಪ್ರೀತಿಸಿ ಪ್ರೀತಿಸಲು ಬೀಡಿ ಪ್ರೀತಿಗಾಗಿ ಜೀವಿಸಿ
ಲೋಕೇಶನ್ನೂ ಪ್ರೀತ್ರೊ ಹೃದಯ ಇರುತ್ತಾ
ಕಾಲೇಜು,ಮ್ಯಾರೇಜು ಮತ್ತು ಇನ್ನೆರಡು ಹಾಸ್ಯ
ಉಪಾಧ್ಯಾಯರು
ಎಸ್ ಎಸ್ ಎಲ್ ಸಿ .ಓದುತ್ತಿದ್ದ ಹುಡುಗಿಯನ್ನು ಉಪಾಧ್ಯಾಯರು
ಕೇಳಿದರು - ನಿನ್ನ ಮುಂದಿನ ಭವಿಪ್ಯವೇನು?
ಹುಡುಗಿ: ಪಾಸಾದರೆ ಕಾಲೇಜು, ಇಲ್ಲದಿದ್ದರೆ ಮ್ಯಾರೇಜು
ಹೀಗೊಂದು ಪ್ರೇಮ ಪತ್ರ
ಪ್ರಿಯೆ,
ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಡಾಕ್ಟರಿಗಿಂತ ಬುದ್ದಿವಂತನಾ?
ಡಾಕ್ಟರ್ : ಸಿಸ್ಟರ್ ಈ ರೋಗಿ ಸತ್ತುಹೋಗಿದ್ದಾನೆ.
ರೋಗಿ : ಇಲ್ಲ ಡಾಕ್ಟರ್! ನಾನಿನ್ನೂ ಬದುಕಿದ್ದೇನೆ
ಸಿಸ್ಟರ್ : ಮುಚ್ಚಯ್ಯ ಬಾಯಿ ಸಾಕು. ಏನೋ ಮಾತಾಡ್ತಾನೆ ಏನು ನೀನು ಡಾಕ್ಟರಿಗಿಂತ ಬುದ್ದಿವಂತನಾ?
ಬೈಟೊ ಕಾಫಿ !!! -
ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಮೋಹನ ಡೆಸ್ಕ್ ಬಳಿ ಎನೋ ಟೆಕ್ನಿಲ್ ಡೌಟ್ ಕೇಳೋ ತರ ಹೋಗಿ "ಏನೊ ರಿಸೈನ್ ಮಾಡಿದ್ಯಂತೆ ಅಂದೆ ... ಅಂತ ಪಿಸುಗುಡುತ್ತಾ ಕೇಳಿದೆ...
ನಡಿ ಕಾಫಿ ಕುಡ್ಕೊಂಡು ಬರ್ಓಣ ..... ಅಂತ ಹೋದ್ವಿ ...
ಅವನು ಹಲ್ಲುಕಿರಿದು "ಯಾರು ಹೇಳಿದ್ರು ?? "... ನಾನು ದೊಡ್ಡ ಜಾಸೂಸ್ ತರ "ಹೇಂಗೊ ಗೊತ್ತಾಯ್ತು" ಅಂದೆ !!!
"ಹೌದು, ೨ ವರ್ಷ ಆಯಿತು , ಅದಕ್ಕೆ .... " ಅಂತ ಮೋಹನ ಹೇಳಿದ
"ಎಲ್ಲಿ ಹೋಗ್ತೈದ್ದಿಯಾ ?? " ಕೇಳಿದೆ
"೩-೪ ಆಫರ್ ಇದೆ, ಡಿಸೈಡ್ ಮಾಡಬೇಕು " ಈಗೆ ಹೇಳಿ ಕುತುಹಲ ಜಾಸ್ತಿ ಮಾಡಿದ. ...
"ಎಷ್ಟು ಆಫರ್ ??
"ಇಲ್ಲಿಗಿಂತ ೫೦% ಜಾಸ್ತಿ "....
"ಆಮೇಲೆ ಇವರೇನು ಹೇಳ್ತ ಇದ್ದಾರೆ ? ಎನಾದ್ರು ಹೈಕ್ ಮಾಡಿದ್ರಾ ? ,
ಹಾಸ್ಯ
ಅದೋ ನೋಡು ಚಂದ್ರಬಿಂಬ ; ಇದೋ ನೋಡು ತಂತಿ ಕಂಬ ; ತುಂಬಿತೇ ನಿತಂಬ ? ಕೈಗೆ ತಗೋ ಪ್ಲಾಷ್ಟಿಕ್ಚಂಬ !!
ಗುಂಡನ ಉತ್ತರಗಳು
ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ....
ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರಃ ಕುಳಿತುಕೊಂಡನು.
ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ
ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಉತ್ತರಃ ಏರಡನೇ ಹೆಜ್ಜೆ ಇಟ್ಟನು.
ಬೀChi ಉವಾಚ
ಬೀChi ಅವರ 'ಬೆಳ್ಳಿ ತಿಮ್ಮ 108 ಹೇಳಿದ' ದಿಂದ...
-ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಶಣ ಎಂದು ಹೆಸರು.
-ಕಂಡುದರಲ್ಲಿ ಮರೆಯಬೇಕಾದ್ದೆಶ್ಟು, ಅರಿಯಬೇಕಾದ್ದೆಶ್ಟು, ಎಂಬುದನ್ನು ಅರಿತವನೇ ಕಡುಜಾಣ.
'ಆನೇಕರು ನನ್ನ ಗ್ರಂಥವನ್ನು ಓದಿ ಹೊಗಳುತ್ತಾರೆ. ಒಬ್ಬ ಸಾಹಿತಿ ಓದದೆಯೇ ಬಯ್ಯುತ್ತಾನೆ. ಊಟಕ್ಕೆ ಬಂದ ಅತಿಥಿಗಳು ಹೆಚ್ಚೋ ಅಥವಾ ನನ್ನಂತಹ ಇನ್ನೊಬ್ಬ ಅಡಿಗೆಯವನೋ ?' ಎಂದು ಕೇಳುತ್ತಾನೆ ಅವಿವೇಕಿ ತಿಮ್ಮ.
-'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು?
-ಕಟ್ಟಕಡೆಗೆ ನಗುವವನಿಗೆ ಉಬ್ಬುಹಲ್ಲೇ ಇರಬೇಕು.
' ಮುಂಗಾರು ಮಳೆ ' ಹಾಡಿನ ಹೊಸ (!?) ಆವೃತ್ತಿ
ಈ ಹಾಡನ್ನು ಎಲ್ಲರೂ ಈಗಾಗಲೇ ಬೇಕಾದಷ್ಟು ಬಾರಿ ಇ-ಮೇಲ್ ಗಳಲ್ಲಿ ಓದಿರುತ್ತೀರಿ.
ಆದರೂ ಮಳೆ ಬಾರದ ಮಳೆಗಾಲದಲ್ಲಿ ಇನ್ನೊಮ್ಮೆ.....
ಅಂದ ಹಾಗೆ ಇದು ನಾನು ಬರೆದದ್ದಲ್ಲ.... ಇ-ಮೇಲ್ ಫಾರ್ವರ್ಡ್ ಆಧಾರಿತ...
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ,
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ,
ಸುರಿವ ರಭಸದಾ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ಭುವಿಯ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿ ನಿಂತೆ ನಾನು
ಜಿರಳೆ
ಅದೊಂದು ರಾತ್ರಿ
ನಾನೊಂದ ಕನಸ ಕಂಡೆ
ನನ್ನ ಎದುರಿನಲ್ಲಿ ನಿಂತಿದ್ದಲೋಬ್ಬಳು ಅಪ್ಸರೆ
ಕೊಟ್ಟಲೊಂದು ವರವ ನನಗೆ ಅವಳು
ಮುಂದಿನ ಜನುಮದಲ್ಲಿ ನೀ ಬಯಸಿದ ರೂಪ ಕೊಡುವೆ
ಹಕ್ಕಿಯಗುವೆಯ? ಇಲ್ಲ ದುಂಬಿಯಾಗುವೆಯ?
ಹೂವಗುವೆಯ ಇಲ್ಲ ಝರಿಯಗುವೆಯ?
ನಾ ಹೇಳಿದೆ ಅಪ್ಸರೆಗೆ
ಸುಳ್ಳು
ಒಮ್ಮೆ ಅಪ್ಪ ಸುಳ್ಳು ಹೇಳಿದರೆ ಕಪಾಳಕ್ಕೆ ಹೊಡೆಯುವ ಒಂದು ಬೊಂಬೆ ಯನ್ನು ತಂದ
ಮಗ ಲೇಟಾಗಿ ಮನೆಗೆ ಬಂದ
ಅಪ್ಪ: ಯಾಕೋ ಲೇಟು?
ಮಗ:ಸ್ಪೆಷಲ್ ಕ್ಲಾಸ್ ಇತ್ತು
ಬೊಂಬೆ ಫಟ್ ಅಂಥ ಮಗನ ಕೆನ್ನೆಗೆ ಹೋದೀತು
ಮಗ: ಅಲ್ಲ ಸಿನಿಮಾಗೆ ಹೋಗಿದ್ದೆ
ಅಪ್ಪ: ಯಾವ ಸಿನಿಮ?
ಮಗ: ಯಾವ್ದೋ ಕನ್ನಡ ಸಿನಿಮ

ಹಾಸ್ಯ (ಸುಮ್ಮನೆ ನಕ್ಕುಬಿಡಿ )2

ಸರ್ವೀಸ್ ಸೆಂಟರ್   
ಸಂತಾ-ಬಂತಾ ಒಂದು ಸರ್ವೀಸ್ ಸೆಂಟರ್ ಶುರು ಮಾಡಿದರು. ಅದು ಆರಂಭವಾಗಿ ಮೂರು ತಿಂಗಳಾದರೂ, ಒಂದೇ ಒಂದು ವಾಹನ ಸಹಾ ಬರಲಿಲ್ಲ... ಯಾಕೆಂದರೆ, ಆ ಸರ್ವೀಸ್ ಸೆಂಟರ್ 5ನೇ ಫ್ಲೋರ್ನಲ್ಲಿತ್ತು..
ಕೊಟ್ಟ ಮಾತು
ಸಂತಾ: ಏನಯ್ಯಾ, ವಿಸ್ಕೀನ ಪೈಪ್ ಹಾಕ್ಕೊಂಡು ಕುಡೀತಾ ಇದ್ದೀಯಲ್ಲ ಯಾಕೆ? 
ಬಂತಾ: ಹೌದು ಕಣೋ. ವಿಸ್ಕೀನ ಕೈಯಿಂದ ಮುಟ್ಟೋದಿಲ್ಲ ಅಂತ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೇನೆ...
ಶತಮೂರ್ಖರು   
ಸಂತಾ: ನಾನು ಇನ್ನು ಫಸ್ಟ್ ಶೋ ಸಿನಿಮಾ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.
ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು. ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕೆಂದ್ರೆ ಅವನಿಗೆ ಫಸ್ಟ್ ಶೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ...!
ಜೋಕ್ಸ್: ಯಾವತ್ತೂ ಸ್ಕೂಲಿಗೆ ಹೋಗದ ಕಿಡ್ನಿ ನಪಾಸು
ಒಮ್ಮೆ ತಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಡಾಕ್ಟರ್ ಬಳಿಗೆ ಹೋಗುತ್ತಾನೆ,

ಡಾಕ್ಟರ್: ನಿನ್ನ ಅನಾರೋಗ್ಯಕ್ಕೆ ಕಾರಣ ಕಿಡ್ನಿ ಫೇಲ್ ಆಗಿರುವುದೇ...!!!
ತಿಮ್ಮ: ಏನ್ಮಾತಾಡ್ತಾ ಇದ್ದೀರಾ ಸಾರ್... ನನ್ನ ಕಿಡ್ನಿ ಯಾವತ್ತೂ ಸ್ಕೂಲಿಗೇ ಹೋಗಿಲ್ಲ ಅದೆಂಗ್ ಫೇಲ್ ಆಗುತ್ತದೆ.
ಒಮ್ಮೆ ಗುಂಡ ಮತ್ತು ತಿಮ್ಮ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋಗುತ್ತಾರೆ. ಅಲ್ಲಿ ಈಜಿಪ್ಟ್ ಮಮ್ಮಿಯನ್ನು ನೋಡಿ
ಗುಂಡ: ಡೌಟೇ ಇಲ್ಲ ಇದಕ್ಕೆ ಇಷ್ಟು ಬ್ಯಾಂಡೇಜ್ ಸುತ್ತಿದ್ದಾರೆಂದರೆ ಖಚಿತವಾಗಿ ಇದು ಲಾರಿ ಆಕ್ಸಿಡೆಂಟ್ ಕೇಸೇ ಆಗಿರಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ.
ತಿಮ್ಮ: ನೀನೇಳೋದು ಕರೆಕ್ಟ್ ಕಣೋ. ಆಕ್ಸಿಡೆಂಟ್ ಮಾಡಿದ ಲಾರಿ ನಂಬರ್ BC 1760 ಅಂತಲೂ ಬರೆದಿದ್ದಾರೆ ಎಂದ.

ಅತ್ತೆ : ನೋಡಮ್ಮಾ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ಟೌವ್ ಮೇಲೆ ಇಡು.
ಸೊಸೆ: ಅಕ್ಕಿ ಯಾವ ಸೋಪಲ್ಲಿ ತೊಳೆಯ ಬೇಕು ಅತ್ತೆ...?
ಅತ್ತೆ : ಆಂ...ಎಂದವಳೆ ಇಂತ ಸೊಸೆ ಸಿಕ್ಕ ಸೌಭಾಗ್ಯಕ್ಕೆ ತಲೆ ಮೇಲೆ ಕೈಹೊತ್ತಿ ಕುಳಿತಳು.
ಆಕ್ಸಿಡೆಂಟ್ 
ಸರ್ದಾರ್ಜಿಗಳು ಪ್ರಯಾಣಿಸುತ್ತಿದ್ದ ಬಸ್ ಆಕ್ಸಿಡೆಂಟ್ ಆಗಿ ಅನೇಕ ಮಂದಿಗೆ ಗಾಯಗಳಾಗಿದ್ದವು. ಒಬ್ಬ ಸರ್ದಾರ್ಜಿ ತನ್ನ ಕೈ ತುಂಡಾಯಿತೆಂದು ಅಳುತ್ತಿದ್ದ. 
ಆಗ, ಇನ್ನೊಬ್ಬ ಸರ್ದಾರ್ಜಿ, ನೋಡು ಅಲ್ಲೊಬ್ಬಂದು ತಲೆಯೇ ತುಂಡಾಗಿದೆ ಆದರೂ ಆತ ಅಳುತ್ತಿಲ್ಲ ಅದಕ್ಕಿಂತ ದೊಡ್ಡದು ಇನ್ನೇನಿದೆ ಎಂದಾಗ ಸರ್ದಾರ್ಜಿ ಅಳು ನಿಲ್ಲಿಸಿದ.
ಜೋಕ್ಸ್
ಮಗು: ಅಮ್ಮ ಪರೀಕ್ಷೆಗೆ ಎಲ್ಲ ತಯಾರಿ ಆಯಿತು ಒಂದು ತಯಾರಿ ಮಾತ್ರ ಬಾಕಿ ಇದೆ
ಅಮ್ಮ: ಯಾವ ತಯಾರಿ ?
ಮಗು : ಪರೀಕ್ಷೆಗೆ ಓದುವುದು
ಅಮ್ಮ:??
ಸರ್ದಾರ್ ಜೋಕ್ಸ್
ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ.
ಗ್ರಂಥಪಾಲಕ : "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!
ಒಂದು ದಿನ ಸರ್ದಾರ್ ಆಫೀಸ್ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ.
ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು... " ಚೀ.. ಸೆಗಣಿ... ಸದ್ಯ ತುಳಿಯಲಿಲ್ಲ..."
ಸರ್ದಾರ್ : ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...?
ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ...
ಸರ್ದಾರ್ : ಅಯ್ಯೋ ಪೆದ್ದ.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ...!!!
ಆಫೀಸ್   
ಸಂತಾ: ಎಂ.ಜಿ.ರಸ್ತೆಯಲ್ಲಿ ನಿನ್ನ ಆಫೀಸ್ ಇದೆ ಅಂದೆಯಲ್ಲ ಎಷ್ಟು ದೊಡ್ಡದಿದೆ? 
ಬಂತಾ: ನೀನು ಏರೋಪ್ಲೇನ್ ನೋಡಿದ್ದೀಯಲ್ಲ?
ಸಂತಾ: ಓಹೋ..
ಬಂತಾ: ಏರೋಪ್ಲೇನ್ನಲ್ಲಿ ನಮ್ಮ ಲಗೇಜ್ ಇಟ್ಟುಕೊಳ್ಳೋಕೆ ತಲೆ ಮೇಲೆ ಬಾಕ್ಸ್ಗಳು ಮಾಡಿರ್ತಾರಲ್ಲ.. ಎರಡು ಬಾಕ್ಸ್ ಸೈಜ್ ಇದೆ ನಮ್ಮ ಆಫೀಸು..
ಹುಡುಗಿ:- ಈ ಅಡ್ರಸ್ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ...??
ಹಾಸ್ಯ
1 ) ೨೦) ನಿಮಗೆ 99% ಬೇಜಾರ್ ಆದ್ರೆ,
01% ಕೋಪ ಇದ್ರೆ,
29% ಸಂತೋಷ ಇದ್ರೆ,
16% ಕಷ್ಟ ಇದ್ರೆ,
78% ಭಯಾ ಇದ್ರೆ.....
ಈ ಎಲ್ಲಾ ನಂಬರ್ ಸೇರಿಸಿ ಇಂದು ಕಾಲ್ ಮಾಡಿ...
ಬೆಸ್ಟ್ ಫ್ರೆಂಡ್ ಸಿಗ್ತಾರೆ..
ಬೇಜಾನ್ ಮಾತಾಡಿ.....
2) ಲವ್ ಕ್ಲಿಕ್ ಆದ್ರೆ,
ಹುಡುಗ ಹುಡುಗಿ ದಿನಾ
PULSAR-DTS-i
ನಲ್ಲಿ ಊರ್ ತುಂಬಾ ರೌಂಡು....
ಹುಡುಗಿ ಕೈ ಕೊಟ್ರೆ...
ಹುಡುಗನ ಮನೆ ಮುಂದೆ
DTS ಎಫೆಕ್ಟ್ ನಲ್ಲಿ ತಮಟೆ ಸೌಂಡು.......

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ.
ತರ್ಲೆ ಮಂಜ(ಗ)ನ ಎದಿರೇಟು....
ಹಾಸ್ಯ
ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.
ತರ್ಲೆ ಮಂಜ(ಗ)ನ ಎದಿರೇಟು....
ಹಾಸ್ಯ
ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.
ರೇಟಿಂಗ್:
ತರ್ಲೆ ಮಂಜ(ಗ) ನಾಟ....ಭಾಗ 2
ಹಾಸ್ಯ
ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....
ಹುಡುಗೀನ ಮದ್ವೆ ಆಗೋ ಮಾರಯ
1970ರಲ್ಲಿ ಮಗಾ ನಮ್ಮ ಜಾತ್ತಿಯ ಹುಡುಗೀನ ಮದುವೆ ಆಗಪ್ಪಾ
1980ರಲ್ಲಿ ನಮ್ಮ ಧಮEದ ಹುಡುಗೀಯನ್ನೇ ಮದುವೆ ಆಗಯ್ಯಾ
1990ರಲ್ಲಿ ನಮ್ಮ ಅಂತಸ್ಸಿಗೆ ತಕ್ಕಂತಿರುವವಳನ್ನೆ ಮದುವೆ ಆಗಬೇಕು ಗೊತ್ತಾಯ್ತಾ
2009ರಲ್ಲಿ ಹುಡುಗೀನ ಮದ್ವೆ ಆಗೋ ಮಾರಯ
ತರ್ಲೆ ಮಂಜ(ಗ) ನಾಟ....
ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.
ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.
ಕಾಲ್ ಸೆಂಟರ್ ....
"ನಿನ್ನ ಜನ್ಮದಲ್ಲಿ ನೀನು PUC ಪಾಸಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.
ರೇಟಿಂಗ್:
ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ?
ಡಾಕ್ಟರ್: ನೀವು ಬುದ್ಧಿವಂತರೇ?
ಸರ್ದಾರ್ಜಿ: ಹೌದು.
ಡಾಕ್ಟರ್: ಹಂಗಾದ್ರೆ ನಿಮ್ಗೆ ಹಲ್ಲಿಲ್ಲದ ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ?
ಸರ್ದಾರ್ಜಿ: ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತಗೋತೀನಿ..
ರೇಟಿಂಗ್:
ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.
ಟೀಚರ್: ಯಾಕೋ ಸೋಮ, ನಿನ್ನೆ ಶಾಲೆಗೆ ಬಂದಿಲ್ಲ ನೀನು?
ಸೋಮ: ನಿನ್ನೆ ಪಿ಼ಲಮ್ಗೆ ಹೋಗಿದ್ದೆ ಮಿಸ್.
ಟೀಚರ್: ನಾಳೆ ಭಾನುವಾರ ಹೋಗಬಹುದಿತ್ತಲ್ವೇ?
ಸೋಮ: ನಾಳೇನೇ ಹೋಗೋಣ ಅಂತ ಯೋಚಿಸಿದ್ದೆ. ಆದ್ರೆ ನೀವೇ ಹೇಳಿದ್ರಲ್ವಾ ಮಿಸ್ ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.
ಗುಂಡ ಪರೀಕ್ಷೆಯಲ್ಲಿ
ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ....
ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?
ಉತ್ತರಃ ಕುಳಿತುಕೊಂಡನು.
ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?
ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ
ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?
ಉತ್ತರಃ ಏರಡನೇ ಹೆಜ್ಜೆ ಇಟ್ಟನು.
ಹಾಸ್ಯಗಳು
ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು?
ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್.
ಅಧ್ಯಾಪಕರು- ಇದನ್ನೇ ಇಂಗ್ಲೀಷ್ನಲ್ಲಿ ಉತ್ತರಿಸು.
ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ."
ಅಡ್ಡ ಹೆಸರು
ಉತ್ತರ ಕರ್ನಾಟಕ ಯಾರದೆ ಮನೆಗೆ ಹೋಗಿ ಅಲ್ಲಿ ನಿಮಗಂತೂ ಮುಜಗುರ ಕಾದಿರುತ್ತೆ ನಿಮ್ಮ ಸ್ನೇಹಿತರನ್ನು ಭೇಟಿಯಾಗಲು ನೀವು ಬಂದಾಗ ಯಾರನ್ನೇ ಕೇಳಿ,ಹೆಸರು ಹೇಳಿದ ತಕ್ಷಣ ಆಡ್ಡ ಹೆಸರೆನ್ರಿ ಅಂತಾರೆ.ನೀವು ಬೆಣ್ಣಿಯವರ, ಮಜ್ಜಗಿ,ಬ್ಯಾಳಿ,ಬೆಲ್ಲದ, ಮೆಣಸಿನಕಾಯಿ, ಸಕ್ರಿ,ಮುಲಂಗಿ,ಆಡೀನ,ಚೋಳಿನ,ಕುರಿ, ನರಿ,ದೊಡ್ಡಮನಿ,ಸಣ್ಣಮನಿ,ನಡುವಿನಮನಿ,ಹಿತ್ತ್ಲಮನಿ,ಸಂದಿಮನಿಯಾಗಲಿ, ಉಳ್ಳಾಗಡ್ಡಿ,ಕೋತಂಬ್ರಿ,ಸೊಪ್ಪಿನ, ಉಪ್ಪಿನ ಆಗಲಿ ಮನೆ ದಾರಿ ತೋರಿಸ್ತಾರೆ.ಮನೆ ಬಾಗಲಿಗೆ ನಿಂತು ನೀವು ಎಮ್ಮಿಯವರ...ಎಮ್ಮಿಯವರನೋ, ಉಂಡಿಯವರ.ಉಂಡಿಯವರೊ ಎಂದಾಗ ಒಳಗಿನಿಂದ ಬಂದ ಯಜಮಾನ್ರು ಯಾರ ಬೇಕಿತ್ತರಿ? ಅಂದಾಗ ಎಮ್ಮಿಯವ್ರು ಬೇಕಿತ್ರಿ ಅಂತಿರಿ.
ಅಡ್ಡ ಹೆಸರು ಪ್ಲೀಸ್ ...............
ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ.
ಬೆತ್ತಲೆ ಗಂಡಸು
ಮಧ್ಯರಾತ್ರಿಯ ನೀರವತೆಯಲ್ಲಿ ಪೊಲೀಸ್ ಸ್ಟೇಷನ್ನಿನ ಫೋನು ಕಿರುಚಿಕೊಂಡಿತು.
“ಹೆಲೋ, ಆಫೀಸರ್, ಇಲ್ಲೊಬ್ಬ ಗಂಡಸು ಬೆತ್ತಲೆ ತಿರುಗುತ್ತಿದ್ದಾನೆ.”
“ಹೌದಾ ಮೇಡಂ, ನಿಮ್ಮ ಅಡ್ರೆಸ್ ಕೊಡಿ ನಾವೀಗಲೇ ಬರ್ತಿದೀವಿ. ಬಾಗಿಲು ಚಿಲಕ ಹಾಕಿಕೊಳ್ಳಿ ಗಾಬರಿಯಾಗಬೇಡಿ.”
ಐದು ನಿಮಿಷದಲ್ಲಿ ಪೊಲೀಸ್ ಆಫೀಸರ್ ಆಕೆಯ ಮನೆಯಲ್ಲಿದ್ದ.
“ಎಲ್ಲಿ ಮೇಡಂ?”
“ಇತ್ತ ಬನ್ನಿ ಆಫೀಸರ್. ನೋಡಿ ಅವನಿನ್ನೂ ನಾಚಿಕೆ ಇಲ್ಲದೆ ನಿಂತಿದ್ದಾನೆ.”
ಸತ್ಯ ಹರಿಚಂದ್ರ
ಗುರುಗಳು: (ಹರಿಶ್ವಂದ್ರನ ಕಥೆ ಹೇಳಿದ ನಂತರ) ಈ ಕಥೆ ನೀತಿ ಏನು ಮಕ್ಕಳೆ ?
ಶಿಷ್ಯರು: ಸುಳ್ಳು ಹೇಳದಿದ್ರೆ.......... ಸುಡುಗಾಡೇ ಗತಿ. !!!
ಮತ್ತು ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು ,
ಜವಾನಿ ಜಾನೆ ಮನ ಮೇರಾ ಜೀನ್ಸ್ ....
ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ.

ಹಾಸ್ಯ (ಸುಮ್ಮನೆ ನಕ್ಕುಬಿಡಿ

ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ?
ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು.
ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ?
ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್!

ಬೆಳಕು
ಟೀಚರ್: ಶಬ್ದ ಮತ್ತು ಬೆಳಕುಗಳಲ್ಲಿ ಯಾವುದು ವೇಗವಾಗಿ ಚಲಿಸುತ್ತದೆ?
ಮೋಹನ: ಬೆಳಕು
ಟೀಚರ್: ಅದನ್ನು ಹೇಗೆ ಸಿದ್ಧಪಡಿಸುತ್ತಿಯ?
ಮೋಹನ: ಮಿಂಚಿದಾಗ ಅದು ನಮಗೆ ಮೊದಲು ಕಾಣುತ್ತದೆ ನಂತರ ಗುಡುಗು ಕೇಳುತ್ತದೆ.
ಟೀಚರ್: ಸರಿ
ಗುಂಡ: ನನಗನಿಸುತ್ತದೆ ಶಬ್ದವೇ ಬೆಳಕಿಗಿಂತ ವೇಗವಾಗಿ ಚಲಿಸುವುದು.
ಟೀಚರ್: ಅದು ಹೇಗೆ?
ಗುಂಡ: ನಮ್ಮ ಮನೆಯಲ್ಲಿ ನಾನು ಜನರೇಟರ್ ಶುರು ಮಾಡಿದಾಗ, ಮೊದಲು ಶಬ್ದ ಬರುತ್ತದೆ, ನಂತರ ಬೆಳಕು ಬರುತ್ತದೆ

ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ "ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ 
ಜತೆಗೆ ವಿವೇಚನೆ ಮುಖ್ಯ" 
ಮಗ "ಪ್ರಾಮಾಣಿಕತೆ ಎಂದರೆ?" 
ಅಪ್ಪ "ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು" 
ಮಗ "ಹಾಗಾದರೆ ವಿವೇಚನೆ ಎಂದರೇನು?" 
ಅಪ್ಪ "ಮಾತು ಕೊಡದೇ ಇರೋದೆ" 
ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು. 
"ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ" 
"ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ 
ನಿಲ್ಲಿಸಿಬಿಡುತ್ತಾಳೆ" 
"ಏತಕ್ಕೆ?" 
"ಉಸಿರಾಡಲಿಕ್ಕೆ" 
ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ 
ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, "ನಿನ್ನೆ ಹೆಂಡತಿಯೊಡನೆ 
ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?" 
"ಅವಳು ನನ್ನೆದುರು ಮೊಣಕಾಲೂರಿದಳು" 
"ಅದು ಹೇಗೆ ಸಾಧ್ಯವಾಯಿತೋ ಮಹರಾಯ?" 
"ನಾನು ಮಂಚದ ಕೆಳಗೆ ನುಸುಳಿದ್ದೆ" 
ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. "ನೀವು ಯಾರು?" ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು 
ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ 
ಉತ್ತರಿಸಿದ "ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ". "ಸರಿಯಗಿಯೇ ಹೇಳಿದಿರಿ. 
ಅದಕ್ಕಿಂತ ಮೊದಲು ಏನಾಗಿದ್ದಿರಿ?" ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ. 
ಶೀಲಾ "ರೀ ಒಂದು ಸೋಪು ಕೊಡಿ." 
ತಿಮ್ಮ "ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ." 
ಶೀಲಾ "ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು 
ಹೇಗೆ?" 
ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ 
ಮಾತುಕತೆ. 
ಶೀಲಾ "ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ." 
ಗಿರಾಕಿ "ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ 
ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?" 
ಶೀಲಾ "ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ." 
ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ 
ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ 
ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ 
ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ 
ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! 
"ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ" 
"ಯಾವುದಯ್ಯಾ ಅದು?" ತಿಂಮ ಕೇಳಿದ. 
"ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . 
ಸುಣ್ಣಬಣ್ಣವಿಲ್ಲ." 
"ತಿಳಿಯಿತು ಬಿಡು" ಎಂದ ತಿಂಮ "ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು." 
ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ? 
ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು. 
ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ? 
ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್! 
ಹುಚ್ಚರಿಬ್ಬರು ಮಾತನಾಡುತ್ತಿದ್ದರು. 
ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ. 
ಎರಡನೇ ಹುಚ್ಚ : ಅದು ಸಾಧ್ಯವಿಲ್ಲ. 
ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ? 
ಎರಡನೇ ಹುಚ್ಚ : ನಾನು ಆ ಸ್ಥ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ. 
"ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?" ಎಂದು ಸೇಲ್ಸ್ಮ್ಯಾನ್ ಕೆಲಸಕ್ಕೆ 
ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು. "ಓಹೋ... 
ಸಾಕಷ್ಟು ಇದೆ ಸಾರ್ ... ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ. 
ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ..." 
ನಿಜವಾದ ಇರುವೆಗಳೇ
ಅಂದು ಗುಂಡ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಗುಂಡ : ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
ಇವಗಿನ್ನೂ 
ಒಮ್ಮೆ ಗುಂಡ ಹಾಗೂ ಮಿತ್ರರು ಪ್ರವಾಸಕ್ಕೆ ಹೋಗುತ್ತರೆ..
ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು..
ಗುಂಡ : ಸುಮ್ನೆ ಬೋಗಳೆ ಬಿಡಬೇಡ! ಇವಗಿನ್ನೂ (2009)!
"ಮೀಯಾಂವ್"!
ಸಂತ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ!
ಬಂತಾ: ನಿಜವಾಗಿಯೂ?! ಏನದರ ಹೆಸರು?
ಸಂತ: "ಮೀಯಾಂವ್"!
ಶಾಕ್ ಹೊಡೆಯುವುದಿಲ್ಲವೇ
ಸಂತ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ?
ಬಂತಾ : ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?!
ಕೊಡೆಯಲ್ಲಿ ತೂತು
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು ಹೋದರೆ ನಂಗೆ ಹೇಗೆ ಗೊತ್ತಗುತ್ತೆ
ಸತ್ತ ಜಿರಳೆ
ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು!
ಮಗ: ಆದ್ರೆ ಅಪ್ಪಾ!...
ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು!
ಮತ್ತೆ ಮಗ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ...
ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು?
ಮಗ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು
ನಾಯಿ ಕಾಟ
ಸಂತಾ ವೈದ್ಯರ ಬಳಿಗೆ ಹೋಗಿ, ನಮ್ಮ ಮನೆಯ ಅಕ್ಕಪಕ್ಕ ನಾಯಿಗಳದ್ದೇ ಸಮಸ್ಯೆ. ನಾಯಿಗಳೆಲ್ಲಾ ಸೇರಿ ರಾತ್ರಿಯಿಡೀ ಬೊಗಳುವುದರಿಂದ ರಾತ್ರಿ ನಿದ್ದೆನೇ ಬರುವುದಿಲ್ಲ ಎಂದು ತನ್ನ ಸಮಸ್ಯೆ ತೋಡಿಕೊಂಡಾಗ, ವೈದ್ಯರು ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಇದನ್ನು ತಗೋ ನಿನ್ನ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.
ಎರಡು ದಿನ ಬಿಟ್ಟು ಮತ್ತೆ ವೈದ್ಯರ ಬಳಿಗೆ ಬಂದ ಸಂತಾ ಇನ್ನಷ್ಟು ಸುಸ್ತಾಗಿದ್ದ. ಕಣ್ಣೆಲ್ಲಾ ಕೆಂಪಗಾಗಿತ್ತು. ಏನಾಯ್ತು ಎಂದು ವೈದ್ಯರು ಆತಂಕದಿಂದ ಕೇಳಿದರು.
ಏನು ಹೇಳಲಿ, ನಾಯಿಗಳನ್ನು ಹಿಡಿಯಲು ಅವುಗಳ ಹಿಂದೆ ಓಡಿ ಓಡಿ ಸುಸ್ತಾಯ್ತು. ಹಿಡಿದ ಬಳಿಕ ಅವುಗಳಿಗೆ ಮಾತ್ರೆ ತಿನ್ನಿಸಲು ಇನ್ನೂ ಕಷ್ಟವಾಯ್ತು ಎಂದ ಸುಸ್ತಾದ ಸಂ
ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಸಂತಾ ಕೇಳಿದ. ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.ಬಂತಾ-ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ.
ಪರ್ಸ್ ಸಿಕ್ಕಿದ್ರೆ..   
ಟೀಚರ್: ದಾರಿಯಲ್ಲಿ ಪರ್ಸ್ ಸಿಕ್ಕಿದ್ರೆ ಏನ್ಮಾಡ್ತೀಯಾ?
ಸಂತಾ: ಬಿಸಾಕ್ತೀನಿ..
ಟೀಚರ್: ಹಾಗ್ಮಾಡಿದ್ರೆ ಪರ್ಸ್ ಯಾರಿಗೂ ಸಿಗದೇ ಹೋಗುತ್ತಲ್ಲ?
ಸಂತಾ: ಅದಕ್ಕಿಂತ ಮೊದ್ಲು ಅದ್ರಲ್ಲಿರೋ ದುಡ್ಡು ತೆಗ್ದಿರ್ತೀವಲ್ವ ಮೇಡಂ..
ಸೀರಿಯಸ್ ಜೋಕ್ಸ್!
ಭಲೇ ಗೌಡ!
ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ ‘ಬೇಕಾದ ವರ ಕೇಳು’ ಎಂದ.
‘ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ’ ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!
ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!
ಯಡ್ಡಿ ಖುಷಿ!
ಯಡಿಯೂರಪ್ಪ ಬಲು ಖುಷಿಯಲ್ಲಿದ್ದರು. ಈ ಹಿಂದೆ ಎರಡೂ ಕಿವಿಗೆ ದೇವೇಗೌಡರು ಹೂವು ಮುಡಿಸಿದ್ದಾರೆ. ಎರಡೂ ಕಿವಿ ಖಾಲಿಯಿಲ್ಲದ ಕಾರಣ, ಮುಂದಿನ ಸಲ ಗೌಡರ ಹೂವು ಮುಡಿಸೋ ಪ್ರಯತ್ನ ಫಲಿಸೋದಿಲ್ಲ ಅನ್ನೋದು ಅವರ ನಂಬಿಕೆ. ಆದರೆ ದೇವೇಗೌಡರು ಈ ಸಲ ಹೂವಿಡೋ ಹಳೇ ಐಡಿಯಾ ಪಕ್ಕಕ್ಕಿಟ್ಟು, ನಾಮ ಹಾಕಲು ಮುಂದಾಗಿದ್ದಾರೆ. ತಿರುಪತಿಯಿಂದ ಒಂದು ಲೋಡು ನಾಮದ ಉಂಡೆ ತರಿಸಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ!
*ಹಡಗಲ್ಲಿ ನಾಡಿನ ನಾಯಕರು!
ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಖಗೆ, ಧರ್ಮಸಿಂಗ್ ಸೇರಿದಂತೆ ನಾಡಿನ ಪ್ರಮುಖರೆಲ್ಲರೂ ಹಡಗು ಹತ್ತಿದ್ದರು. ಒಂದು ತೂತಿನ ಪರಿಣಾಮ ನೀರು ಒಳ ಬರುತ್ತಿತ್ತು. ಒಂದು ವೇಳೆ ಹಡಗು ಮುಳುಗಿದರೆ ಯಾರು ಉಳಿಯುತ್ತಾರೆ?
ತುಂಟ ಮತದಾರನ ಉತ್ತರ : ಯಾರು ಉಳಿಯುವರೋ ಖಾತ್ರಿ ಇಲ್ಲ, ಕನ್ನಡಿಗರಂತೂ ಉಳಿಯುತ್ತಾರೆ!
*ಎಲೆಕ್ಷನ್ ಗಾದೆಗಳು
* ಮತದಾರರಿಗೊಂದು ಕಾಲ, ಎಂಎಲ್ಎಗಳಿಗೊಂದು ಕಾಲ!
* ಬಿ ಫಾರಂಗೋದ ಮಾನ, ಇನ್ನೊಂದು ಪಕ್ಷಕ್ಕೆ ಜಿಗಿದರೆ ಬರುತ್ತಾ?
* ಎಲ್ಲಾ ಶಾಸಕರ ಮನೆ ದೋಸೆಯೂ ತೂತೇ.
* ಗೆದ್ದ ಪಕ್ಷದ ಬಾಲ ಹಿಡಿ
* ಗೆಲ್ಲರಾರದ ಅಭ್ಯರ್ಥಿ ಕ್ಷೇತ್ರ ಡೊಂಕು ಎಂದ!
ನೇಣು ಹಾಕಿದ್ದು..   
ಸಂತಾ ಮತ್ತು ಬಂತಾ ಮೆಂಟಲ್ ಆಸ್ಪತ್ರೆಗೆ ಸೇರಿದ್ದರು. ಒಂದು ದಿನ ಸಂತಾ ಈಜುಕೊಳಕ್ಕೆ ಬಿದ್ದು ಬಿಟ್ಟ. ಇದನ್ನು ನೋಡಿದ ಬಂತಾ ತಕ್ಷಣ ನೀರಿಗೆ ಹಾರಿ ಸಂತಾನನ್ನು ಬದುಕಿಸಿದ.
ಡಾಕ್ಟರ್: ನಿನಗೆ ಒಂದು ಒಳ್ಳೆಯ ಸುದ್ದಿ ಹಾಗೂ ಕೆಟ್ಟ ಸುದ್ದಿ ಇದೆ. ಒಳ್ಳೆ ಸುದ್ದಿ ಏನಂದರೆ ನಿನ್ನನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ. ನಿನಗೆ ನೀರಿಗೆ ಹಾರಲು ಮತ್ತು ಒಬ್ಬನ ಜೀವ ಉಳಿಸುವಷ್ಟು ಬುದ್ಧಿ ಬಂದಿದೆ. ಕೆಟ್ಟ ಸುದ್ದಿ ಏನೆಂದರೆ ನೀನು ಬದುಕಿಸಿದ ವ್ಯಕ್ತಿ ಬಾತ್ ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ.
ಬಂತಾ: ಅವನನ್ನು ಮೇಲೆ ತೂಗಿ ಹಾಕಿದ್ದು ನಾನೇ.. ನೀರಿಗೆ ಬಿದ್ದಿದ್ದ ಅಲ್ವಾ.. ಅದಕ್ಕೆ ಒಣಗಲಿ ಅಂತಾ..
ಮದುವೆ ಮತ್ತು ಸುಖ   
ಸಂತಾ: ಪ್ರೀತಿಸಿ ಮದ್ವೆಯಾದ್ರೆ ಸುಖವಾಗಿ ಇರಬಹುದೋ ಅಥವಾ ಅಪ್ಪ-ಅಮ್ಮ ತೋರಿಸಿದ ಹುಡುಗಿ ಕುತ್ತಿಗೆಗೆ ತಾಳಿ ಬಿಗಿದರೆ ಸುಖವಾಗಿ ಬಾಳಬಹುದೋ?
ಬಂತಾ: ಅದೆಲ್ಲ ನಡೆಯಲ್ಲ ಕಣೋ.. ಏನಾದ್ರೂ ಮಾಡಿ ಮದುವೇನ ಮುಂದೆ ಹಾಕ್ತಿರು.. ಮದುವೆ ಮತ್ತು ಸುಖ ಯಾವತ್ತೂ ಒಟ್ಟೊಟ್ಟಿಗೆ ಇರೋಲ್ಲ..
ಬೆತ್ತಲೆ ಚಿತ್ರ ನಿಂದಾ?   
ಸಂತಾ ಮತ್ತು ಆತನ ಹೆಂಡತಿ ನಗ್ನ ಕಲಾ ಪ್ರದರ್ಶನ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ತನ್ನ ಹೆಂಡತಿಯ ಚಿತ್ರವನ್ನು ನೋಡಿ ಪ್ರಶ್ನಿಸಲಾರಂಭಿಸಿದ.
ಸಂತಾ: ನಿಜಕ್ಕೂ ಚಿತ್ರ ಬಿಡಿಸಲು ನೀನು ಪೋಸ್ ಕೊಟ್ಟಿದ್ಯಾ?
ಹೆಂಡತಿ: ನಿಂಗೇನು ಹುಚ್ಚು ಹಿಡಿದಿದ್ಯಾ? ಚಿತ್ರ ಬಿಡಿಸೋನು ತನ್ನ ಶುದ್ಧ ಸ್ಮರಣ ಶಕ್ತಿಯಿಂದ ಬಿಡಿಸಿದ್ದಾನೆ.. ಅಷ್ಟೇ..!
ತಪ್ಪು ಮಾಹಿತಿ   
ಡಾಕ್ಟರ್: ಇಲ್ಲಿ ಬರುವ ಮೊದಲು ನೀವು ಎಲ್ಲಿಗೆಲ್ಲಾ ಹೋಗಿದ್ರಿ?
ಸಂತಾ: ಪಕ್ಕದ ಮೆಡಿಕಲ್ಗೆ ಹೋಗಿದ್ದೆ.
ಡಾಕ್ಟರ್: ಅವರೇನಾದ್ರೂ ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದರೇ?
ಸಂತಾ: ಹೌದು ಸಾರ್.. ನೀವೊಳ್ಳೆ ಡಾಕ್ಟರ್.. ಅವರಲ್ಲಿಗೇ ಹೋಗಿ ಅಂದ್ರು..!
ಸೋಮಾರಿ ಸಂತಾ   
ಸಂತಾ ರೈಲಿನಲ್ಲಿ ಹೋಗ್ತಿದ್ದ. ಯಾವುದೇ ಸ್ಟೇಷನ್ನಲ್ಲಿ ರೈಲು ನಿಂತಿತ್ತು. ಜೋರು ಮಳೆಯಾಗುತ್ತಿದ್ದ ಕಾರಣ ಕೆಳಗಿಳಿಯಲು ಸೋಮಾರಿತನ ಅಡ್ಡ ಬಂತು. ಅಲ್ಲೇ ಹೊರಗಿದ್ದವನೊಬ್ಬನನ್ನು ಕರೆದು 10 ರೂಪಾಯಿ ಕೊಟ್ಟು, 'ನಮಗಿಬ್ಬರಿಗೆ ತಿನ್ನಲು ಏನಾದ್ರೂ ತಗೊಂಡು ಬಾ' ಎಂದ.
ಸ್ವಲ್ಪ ಹೊತ್ತಿನ ನಂತರ ಬಾಯ್ತುಂಬಾ ತಿನ್ನುತ್ತಾ ಬಂದ ಆತ ಐದು ರೂಪಾಯಿ ವಾಪಸು ಕೊಟ್ಟು, 'ಅಲ್ಲಿ ಒಂದೇ ಪ್ಲೇಟ್ ಇದ್ದದ್ದು' ಎನ್ನಬೇಕೇ..
ಕಳ್ಳತನ
ಪೊಲೀಸ್ ಅಧಿಕಾರಿ ಸಂತಾ ಕಳ್ಳನೊಬ್ಬನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದ. ಕೊನೆಗೆ ಸಾಕಾಗಿ ಬುದ್ಧಿ ಹೇಳಲಾರಂಭಿಸಿದ.
ಸಂತಾ: ಯಾಕಪ್ಪ ಕಳ್ಳತನ ಮಾಡ್ತೀಯಾ? ಬಿಟ್ಟು ಬಿಡು..
ಕಳ್ಳ: ಏನು ಮಾಡೋದು ಸಾರ್.. ನಿಮ್ಮ ಮತ್ತು ನನ್ನ ಹೊಟ್ಟೆ ತುಂಬಬೇಕಲ್ಲ...
ಬುದ್ಧಿವಂತ   
ಸಂತಾ ಕಂಠ ಪೂರ್ತಿ ಕುಡಿದು ಮಧ್ಯರಾತ್ರಿ ಕರೆಂಟ್ ಕಂಬದೆದುರು ನಿಂತು ಕೀಲಿ ಹಾಕಲು ಬೀಗ ಹುಡುಕುತ್ತಿದ್ದ.
ಬಂತಾ: ಏನೂ ಪ್ರಯೋಜನವಿಲ್ಲ.. ಮನೆಯಲ್ಲಿ ಯಾರೂ ಇಲ್ವಲ್ಲ.
ಸಂತಾ: ಹಾಗಲ್ಲ ಮಾರಾಯ.. ಮೇಲೆ ನೋಡಂತೆ ಲೈಟ್ ಉರೀತಾ ಇದೆ..
ಕೇಶವರ್ದಕ ತೈಲ   
ಸಂತಾ: ಯಾಕೋ ನಿನ್ನ ತಲೆ ಕೂದಳೆಲ್ಲ ಉದುರ್ತಾ ಇವೆ.. ನಮ್ಮ ಕಂಪನಿಯ ಕೇಶವರ್ದಕ ತೈಲ ಬಳಸಿಲ್ವ?
ಬಂತಾ: ಇಲ್ಲ ಕಣೋ.. ಅದನ್ನು ಬಳಸದೆಯೇ ತನ್ನಿಂತಾನೇ ಕೂದಲು ಉದುರುತ್ತಿದೆ..!
ಮಹಾನುಭಾವ   
ಬಂಗ್ಲೆಯಿಂದ ಹೊರ ಬರುತ್ತಿದ್ದ ಸಂತಾನನ್ನು ನೋಡಿದ ಬಂತಾ ಅಲ್ಲೇ ಆಡುತ್ತಿದ್ದ ಮಗುವೊಂದರಲ್ಲಿ, 'ಆ ಮಹಾನುಭಾವ ಯಾರಪ್ಪಾ?' ಎಂದಾಗ, ಮಗು 'ಅದು ಮಹಾನುಭಾವ ಅಲ್ಲ, ನನ್ನ ಅಪ್ಪ' ಎಂದಿತಂತೆ..!
ಅದೇ ಹೆಂಡತಿ   
ಸಂತಾ ಸಿಕ್ಕಾಪಟ್ಟೆ ಕುಡಿದಿದ್ದ. ಅಮಲಿನಲ್ಲಿ ಯಾರೋ ಒಬ್ಬಳು ಸಿಕ್ಕಿದವಳನ್ನು ಎಳೆದುಕೊಂಡು ಮನೆಗೆ ಬಂದಿದ್ದ. ಮನೆಗೆ ಬಂದು ನೋಡುವಾಗ ಅದು ಸಂತಾನದೇ ಹೆಂಡತಿ. ಆತನನ್ನು ಹುಡುಕಿಕೊಂಡು ಆಕೆ ವೈನ್ ಶಾಪ್ಗೆ ಹೋಗಿದ್ದಳು..!
ನೆನಪಾಗ್ತಿಲ್ವ?   
ಸಂತಾನ ಮನೆಗೆ ನೆಂಟರೊಬ್ಬರು ಬಂದು ವಾರ ಕಳೆದರೂ ವಾಪಸಾಗುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಏನಾದ್ರೂ ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದ ಸಂತಾ, 'ನಿಮ್ಗೆ ಹೆಂಡತಿ, ಮಕ್ಕಳ ನೆನಪಾಗ್ತಿಲ್ವ ಮಾರಾಯ್ರೆ..' ಎಂದ. ತಟ್ಟನೆ ಪ್ರತಿಕ್ರಿಯಿಸಿದ ನೆಂಟ, 'ನೀವು ಕೇಳಿದ್ದು ಒಳ್ಳೇದಾಯ್ತು.. ನಾಳೇನೆ ಅವರನ್ನು ಇಲ್ಲಿ ಬರಲು ಹೇಳ್ತೇನೆ' ಎನ್ನಬೇಕೇ..!